Posts Slider

Karnataka Voice

Latest Kannada News

ಹುಬ್ಬಳ್ಳಿ ಕಿಮ್ಸಗೆ ಅಡ್ಮೀಟ್ ಮಾಡಿ ಪರಾರಿ: ಗಾಯಗೊಂಡಿದ್ದ ಯುವಕ ಸಾವು- ಪೊಲೀಸರ ಹುಡುಕಾಟ…!

Spread the love

ಹುಬ್ಬಳ್ಳಿ: ನಗರದ ಕಟ್ಟಡವೊಂದರಲ್ಲಿ ಕೆಲಸ ಮಾಡುವಾಗ ಬಿದ್ದಿದ್ದಾನೆಂದು ಹೇಳಿ ಕಿಮ್ಸಗೆ ದಾಖಲು ಮಾಡಿದ್ದ ಯುವಕನೋರ್ವ ಸಾವಿಗೀಡಾಗಿದ್ದು, ತಂದು ಹಾಕಿದವರು ಕಣ್ಣು ತಪ್ಪಿಸಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸುಮಾರು 28ರಿಂದ 30 ವಯಸ್ಸಿನ ಯುವಕನೋರ್ವ ತೀವ್ರ ಥರದ ಗಾಯಗಳಿಂದ ಬಳಲುತ್ತಿದ್ದ. ಕಟ್ಟಡದಿಂದ ಬಿದ್ದಿದ್ದಾನೆಂದು ಆಟೋದಲ್ಲಿ ಬಂದಿದ್ದ ಇಬ್ಬರು, ರೋಗಿಯನ್ನ ದಾಖಲು ಮಾಡಿ, ಅಲ್ಲಿಂದ ಕಾಲ್ಕೀತ್ತಿದ್ದಾರೆ.

ಕೆಲ ಸಮಯದ ನಂತರ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ್ದು, ಈತನ ಬಗ್ಗೆ ಯಾವುದೇ ಮಾಹಿತಿ ಸಿಗದೇ ಕಿಮ್ಸ್ ಸಿಬ್ಬಂದಿ ಕಂಗಾಲಾಗಿದ್ದಾರೆ.

ಈ ಬಗ್ಗೆ ಕಿಮ್ಸನಲ್ಲಿರುವ ವಿದ್ಯಾನಗರ ಠಾಣೆಯ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದು, ರೋಗಿಯನ್ನ ಕರೆದುಕೊಂಡು ಬಂದಿದ್ದು ಯಾರೂ ಎಂಬುದನ್ನ ಹುಡುಕಾಟ ನಡೆಸಿದ್ದಾರೆ.


Spread the love

Leave a Reply

Your email address will not be published. Required fields are marked *