ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡನ ಸಂಬಂಧಿಯ ಬರ್ಭರ ಹತ್ಯೆ…!
1 min readಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಮುಖಂಡರೋರ್ವರ ಸಂಬಂಧಿಯನ್ನ ಕೆಲವರು ಕೂಡಿಕೊಂಡು ಕೊಲೆ ಮಾಡಿರುವ ಘಟನೆ ಗೋಪನಕೊಪ್ಪದ ಬಳಿ ಸಂಭವಿಸಿದೆ.
ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದ ಈಶ್ವರಗೌಡ ಪಾಟೀಲ ಅವರ ಸಹೋದರ ಸಂಬಂಧಿ ಅಭಿಷೇಕ ಪಾಟೀಲ ಎಂಬಾತನನ್ನ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿದ್ದಾರೆ.
ಅಭಿಷೇಕ ಪಾಟೀಲ ಎಂಬಾತನಿಗೆ ಆತನ ಜೊತೆಗೆ ಹಳೇಯ ವೈಷಮ್ಯವನ್ನ ಹೊಂದಿದ್ದ ಕೆಲವರು ಚಾಕು ಇರಿದು ಕೊಲೆ ಮಾಡಿದ್ದಾರೆ. ಗೋಪನಕೊಪ್ಪದ ಬಳಿಯಲ್ಲಿಯೇ ಘಟನೆ ನಡೆದಿದೆ.
ಸಿದ್ಧರಾಮನಗರದ ಪ್ರದೀಪ ಎಂಬುವವರ ತಂಡದಿಂದಲೇ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಈ ಹಿಂದೆಯೂ ಪಾಟೀಲರ ಮನೆಗೆ ಬಂದು ಕಾರಿನ ಗಾಜನ್ನ ಒಡೆದು ಹೋಗಿದ್ದರು.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡು ರಕ್ತಸಿಕ್ತವಾಗಿದ್ದ ಅಭಿಷೇಕನ್ನ ಕಿಮ್ಸಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಕಿಮ್ಸಗೆ ಡಿಸಿಪಿ ಕೆ.ರಾಮರಾಜನ್ ಭೇಟಿ ನೀಡಿ ಮಾಹಿತಿಯನ್ನ ಪಡೆಯುತ್ತಿದ್ದಾರೆ.