Karnataka Voice

Latest Kannada News

ರಾಜ್ಯದಲ್ಲಿ ಕಡಿಮೆಯಾಗದ ಕೊರೋನಾ ಸಾವುಗಳು: ಇಂದ್ಯಾವ ಜಿಲ್ಲೆಯಲ್ಲಿ ಎಷ್ಟೇಷ್ಟು ಪಾಸಿಟಿವ್ ಪ್ರಕರಣ…!

ಬೆಂಗಳೂರು: ರಾಜ್ಯದಲ್ಲಿ ಎರಡನೇಯ ಅಲೆಯ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ ಆದರೂ, ಸಾವುಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇಂದು ಕೂಡಾ ರಾಜ್ಯದಲ್ಲಿ 192 ಸೋಂಕಿತರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿಂದು 10959 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 20246 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದ ಬೆಂಗಳೂರಲ್ಲೇ 2395 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 50 ಸೋಂಕಿತರು ಸಾವಿಗೀಡಾಗಿದ್ದಾರೆ.

ಧಾರವಾಡ ಜಿಲ್ಲೆಯಲ್ಲೂ 9 ಸೋಂಕಿತರು ಸಾವಿಗೀಡಾಗಿದ್ದು, ಹೊಸದಾಗಿ 275 ಪ್ರಕರಣಗಳು ಪತ್ತೆಯಾಗಿವೆ. 385 ಸೋಂಕಿತರು ಚಿಕಿತ್ಸೆ ಫಲಿಸಿ ಗುಣಮುಖರಾಗಿದ್ದಾರೆ.

Leave a Reply

Your email address will not be published. Required fields are marked *