Posts Slider

Karnataka Voice

Latest Kannada News

ಡಿಕೆಶಿ ಬಂದಾಗ ಕಾನೂನು ಉಲ್ಲಂಘನೆ- ದಂಡ ವಿಧಿಸಿದ ಪಾಲಿಕೆ: ಕರ್ನಾಟಕವಾಯ್ಸ್.ಕಾಂ ಇಂಪ್ಯಾಕ್ಟ್…

Spread the love

ಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರು ಬಂದಾಗ, ಸಾಮಾಜಿಕ ಅಂತರ ಮರೆತ ಬಗ್ಗೆ ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ನೀಡಿತ್ತು. ಈ ಮಾಹಿತಿಗೆ ಅನುಗುಣವಾಗಿ ಮಹಾನಗರ ಪಾಲಿಕೆ ಹತ್ತು ಸಾವಿರ ರೂಪಾಯಿ ದಂಡವನ್ನ ವಿಧಿಸಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಡಿ.ಕೆ.ಶಿವುಕುಮಾರ ಅವರು ಕೇಶ್ವಾಪುರದ ಮದರ್ ತೆರೇಸಾ ಪ್ರತಿಮೆಯ ಬಳಿ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಕೊರೋನಾ ನಿಯಮಾವಳಿಗಳನ್ನ ಗಾಳಿಗೆ ತೂರಲಾಗಿತ್ತು.

ಯಾವುದೇ ಸಾಮಾಜಿಕ ಅಂತರವಿಲ್ಲದೇ ಕೆಲವರು ಮಾಸ್ಕ್ ಹಾಕಿಕೊಳ್ಳದೇ ಇರುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ಹೊರಹಾಕಿತ್ತು.

ಈ ಹಿನ್ನೆಲೆಯಲ್ಲಿಎರಡು ಜೋನಲ್ ಗಳು ಕೂಡಿಕೊಂಡು ಹತ್ತು ಸಾವಿರ ರೂಪಾಯಿ ದಂಡವನ್ನ ಹಾಕಿ, ಸ್ಥಳದಲ್ಲಿದ್ದ ಪ್ರಚಾರ ಸಾಮಗ್ರಿಗಳನ್ನ ಮಹಾನಗರ ಪಾಲಿಕೆ ತೆರವುಗೊಳಿಸಿತು.


Spread the love

Leave a Reply

Your email address will not be published. Required fields are marked *