Karnataka Voice

Latest Kannada News

ಹು-ಧಾದಲ್ಲಿ ನೂರಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ- ಡಿಸಿಪಿ ಕೆ.ರಾಮರಾಜನ್ ಹೇಳಿದ್ದೇನು…!

ಹುಬ್ಬಳ್ಳಿ: ಅವಳಿನಗರದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ನೂರಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ ಸೋಂಕು ತಗುಲಿತ್ತು. ಆದರೆ, ಅವರಲ್ಲಿ ಬಹುತೇಕರು ಗುಣಮುಖರಾಗಿ ಮತ್ತೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆಂದು ಡಿಸಿಪಿ ಕೆ.ರಾಮರಾಜನ್ ಹೇಳಿದರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಹಗಲಿರುಳು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಡಿಸಿಪಿ ಕೆ.ರಾಮರಾಜನ್ ಅವರು ಈ ಬಗ್ಗೆ ಮಾಹಿತಿಯನ್ನ ನೀಡಿದ್ದು, ಇಲ್ಲಿದೆ ನೋಡಿ.

ಪೊಲೀಸರಿಗೆ ವ್ಯಾಕ್ಸಿನೇಷನ್ ಮಾಡಿದ್ದು ಬಹಳ ಉಪಯೋಗವಾಗಿದೆ. 109 ಪೊಲೀಸರ ಪೈಕಿ ಬಹುತೇಕರು ಮತ್ತೆ ಬಂದು ಡ್ಯೂಟಿ ಮಾಡುತ್ತಿದ್ದಾರೆ. ಒಂದಿಬ್ಬರು ಮಾತ್ರ ರೆಸ್ಟಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಲಾಕ್ ಡೌನ್ ಸಮಯದಲ್ಲಿ ಜನರು ಸಾಕಷ್ಟು ಸಹಕಾರ ನೀಡುತ್ತಿದ್ದು, ಬಹುತೇಕರು ಹೊರಗೆ ಬರದೇ ನಿಯಮಗಳನ್ನ ಪಾಲನೆ ಮಾಡುತ್ತಿದ್ದಾರೆಂದು ಡಿಸಿಪಿ ಕೆ.ರಾಮರಾಜನ್ ಹೇಳಿದರು.

Leave a Reply

Your email address will not be published. Required fields are marked *