Posts Slider

Karnataka Voice

Latest Kannada News

ಧಾರವಾಡ ಅತ್ಯಾಚಾರ ಪ್ರಕರಣ- ನಾಳೆ ಮತ್ತೊಂದಿಷ್ಟು ಸಾಕ್ಷ್ಯಗಳು ಬಹಿರಂಗ…!

Spread the love

ಧಾರವಾಡ: ಮಹಿಳಾ ಅಧಿಕಾರಿಯಿಂದ ಮುಚ್ಚಿ ಹಾಕಲ್ಪಟ್ಟಿದೆ ಎಂದು ಹೇಳಲಾಗುತ್ತಿರುವ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಮತ್ತೊಂದಿಷ್ಟು ಮಹತ್ವದ ಸಾಕ್ಷ್ಯಗಳು ದೊರೆಯಲಿದ್ದು, ಅವುಗಳೆಲ್ಲವೂ ಕರ್ನಾಟಕವಾಯ್ಸ್.ಕಾಂ ಮೂಲಕ ಹೊರ ಬೀಳಲಿವೆ.

ಘಟನೆ ನಡೆದ ದಿನದಂದು ಎಷ್ಟು ಗಂಟೆಗೆ ಯುವತಿಯನ್ನ ಯಾರೂ ಯಾರೂ ಕರೆದುಕೊಂಡು ಹೋದರು. ಎಲ್ಲಿಗೆ ಕರೆದುಕೊಂಡು ಹೋದರು. ಮತ್ತು ಆ ಮೂವರ ಮೊಬೈಲ್ ನಂಬರಗಳೇನು ಎಂಬುದರ ಬಗ್ಗೆ ವಿವರವೂ ದೊರಕಲಿದ್ದು, ಅವುಗಳೆಲ್ಲವೂ ಬಹಿರಂಗವಾಗಲಿವೆ.

ಯುವತಿಯ ಮೇಲೆ ನಡೆದಿರುವ ಘಟನೆಯ ಬಗ್ಗೆ ನೊಂದ ಕುಟುಂಬದವರು ಮಹಿಳಾ ಅಧಿಕಾರಿಗೆ ಬೇಡಿಕೊಂಡರೂ, ದೂರು ದಾಖಲು ಮಾಡಿಕೊಳ್ಳದೇ, ‘ಮದುವೆ ಮಾಡಕೋತ್ತಾನಂತ’ ಎಂದು ಹೇಳಿ ಕಳಿಸಲಾಗಿದೆ ಎಂಬುದರ ಬಗ್ಗೆಯೂ ಮತ್ತಷ್ಟು ವಿವರ ದೊರಕಲಿವೆ.

ನಾನು ಮುಂದೆ ತಾಯಿ ಆಗೋಳು ಎನ್ನುತ್ತಲೇ ಯುವತಿಗೆ ಅನ್ಯಾಯ ಮಾಡಿದ ಮಹಿಳಾ ಅಧಿಕಾರಿಯ ಬಗ್ಗೆ ವಿವರವನ್ನ ನಾಳೆ ಕರ್ನಾಟಕವಾಯ್ಸ್.ಕಾಂ ಹೊರ ಹಾಕಲಿದೆ. ಯುವತಿಗೆ ಆಗಿರುವ ಅನ್ಯಾಯ ಮತ್ತು ಕಿರಾಕತರ ವಿರುದ್ಧ ಪ್ರಕರಣ ದಾಖಲು ಆಗುವವರೆಗೂ ಈ ಘಟನೆಯ ಪ್ರತಿ ಹಂತವನ್ನೂ ನಿಮ್ಮ ಧ್ವನಿಯಾಗಿರುವ ಕರ್ನಾಟಕವಾಯ್ಸ್.ಕಾಂ ಹೊರ ಹಾಕುತ್ತಲೇ ಇರುತ್ತದೆ.


Spread the love

Leave a Reply

Your email address will not be published. Required fields are marked *