Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಹೊತ್ತಿ ಉರಿದ ಟಾಟಾ ಏಸ್..!

1 min read
Spread the love

ಹುಬ್ಬಳ್ಳಿ: ತಾಲೂಕಿನ ಬಂಡಿವಾಡದಿಂದ ನವನಗರದ ಬಳಿಯಿರುವ ಕೃಷಿ ಮಾರುಕಟ್ಟೆಗೆ ಬರುತ್ತಿದ್ದ ಟಾಟಾ ಏಸ್ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಚಾಲುಕ್ಯನಗರದ ಬಳಿಯ ಗದಗ ರಸ್ತೆಯಲ್ಲಿ ನಡೆದಿದೆ.

ಬಂಡಿವಾಡ ಗ್ರಾಮದಿಂದ ಹುಬ್ಬಳ್ಳಿಯ ಎಪಿಎಂಸಿಗೆ ಮೆಣಸಿನಕಾಯಿ ತರುತ್ತಿದ್ದ ಟಾಟಾ ಏಸ್ ವಾಹನಕ್ಕೆ ತಾಂತ್ರಿಕ ದೋಷದಿಂದ ಬೆಂಕಿ ತಗುಲಿದೆ. ಮಾರುತೆಪ್ಪ ಹನುಮಂತಪ್ಪ ದುರ್ಗಮ್ಮಣ್ಣವರ ಎಂಬುವರಿಗೆ ಸೇರಿದ ವಾಹನದಲ್ಲಿ ಸಾವಿರಾರೂ ರೂಪಾಯಿ ಮೌಲ್ಯದ ಮೆಣಸಿಕಾಯಿ ಕೂಡಾ ಸುಟ್ಟಿದ್ದು, ಉಪಯೋಗಕ್ಕೆ ಬಾರದ್ದಾಗಿದೆ.

ಬೆಂಕಿ ತಗುಲಿದ ಪ್ರಕರಣ ಗೊತ್ತಾದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೆಲಕಾಲ ಪ್ರಯತ್ನಿಸಿ, ಬೆಂಕಿಯನ್ನ ನಂದಿಸಿದರು. ಆದರೆ, ವಾಹನದ ಬಹುತೇಕ ಭಾಗ ಸುಟ್ಟು ಹೋಗಿದೆ.

ನಡುರಸ್ತೆಯಲ್ಲೇ ಘಟನೆ ನಡೆದಿದ್ದರಿಂದ ಇನ್ನುಳಿದ ವಾಹನ ಸವಾರರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ದೂರವೇ ನಿಂತು ಬೆಂಕಿ ನಂದಿಸುವವರೆಗೂ ಕಾಯ್ದು ನಂತರ ತೆರಳಿದರು.

ಘಟನೆಗೆ ಸಂಬಂಧಿಸಿದಂತೆ ಕೇಶ್ವಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.


Spread the love

Leave a Reply

Your email address will not be published. Required fields are marked *

You may have missed