Posts Slider

Karnataka Voice

Latest Kannada News

ಹೆದ್ದಾರಿ ಪ್ರಾಧಿಕಾರದ ಅಬ್ಬೇಪಾರಿ ಕಾರು: ಪ್ರಾಣ ಪಕ್ಷಿ ಹಾರಿ ಹೋಗುತ್ತಿತ್ತಷ್ಟೇ..!

1 min read
Spread the love

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಬಳಿ ನಡೆಯುತ್ತಿದ್ದ ಅಪಘಾತವೊಂದು ಸ್ವಲ್ಪದರಲ್ಲೇ ತಪ್ಪಿದ್ದು, ಕಾರು ಚಾಲಕ ಗಾಬರಿಯಿಂದ ಆಸ್ಪತ್ರೆ ಸೇರಿದ ಘಟನೆ ಸಂಭವಿಸಿದ್ದು, ವೇಗವಾಗಿ ಬಂದ ವಾಹನ ಮೇಲೆ ಜನರು ಆಕ್ರೋಶವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಕಾರಿನಲ್ಲಿ ಬರುತ್ತಿದ್ದ ಮಹಿಳಾ ಅಧಿಕಾರಿಯೂ ಕಾರನ್ನ ವೇಗವಾಗಿ ತಂದು ಸಡನ್ನಾಗಿ ಕಾರನ್ನ ನಿಲ್ಲಿಸಿದ್ದಾರೆ. ಆದರೆ, ಬಂದು ತನಗೆ ಬಂದು ಕಾರು ಡಿಕ್ಕಿ ಹೊಡೆಯಿತು ಎಂದುಕೊಂಡು ಗಾಬರಿಯಾಗಿ ಜಿಗಿದು ಹೋಗಿದ್ದಾನೆ.

ಜಮಖಂಡಿಯ ದೀಪರಾಜ ನಲವಡೆ ಎನ್ನುವವರಿಗೆ ಸೇರಿದ ಕಾರನ್ನ ಚಲಾಯಿಸುತ್ತಿದ್ದ ಧಾರವಾಡ ಮಾಳಾಪುರ ಶಹೀನ ಎಂಬಾತನೇ ಗಾಬರಿಯಾಗಿ, ಮೈಯಲ್ಲ ತಣ್ಣಗಾಗಿದೆ. ಅಷ್ಟೇ ಅಲ್ಲ, ತಾನೂ ಪೋಟೊ ಆಗುತ್ತಿದೆ ಎಂದುಕೊಳ್ಳುತ್ತಲೇ ಆಸ್ಪತ್ರೆ ಸೇರಿದ್ದಾನೆ.

ವೇಗವಾಗಿ ಕಾರು ಚಲಾಯಿಸಿ ಗಾಬರಿ ಹುಟ್ಟಿಸಿದ ಮಹಿಳಾ ಅಧಿಕಾರಿ, ಚಾಲಕ ಶಹೀನ್ ಗೆ ಕ್ಷಮಿಸಿ ಎಂದು ಹೇಳಿ, ಅಲ್ಲಿಂದ ಕಾಲ್ಕಿತ್ತಿದ್ದು, ಶಹೀನ ಮಾತ್ರ ಪರಿಸ್ಥಿತಿಯಿಂದ ಹೊರ ಬರಲು ಹೆಣಗಾಡುತ್ತಿದ್ದಾನೆ.


Spread the love

Leave a Reply

Your email address will not be published. Required fields are marked *