Posts Slider

Karnataka Voice

Latest Kannada News

ಎಂಎಲ್ಸಿ ಚುನಾವಣೆ ಕೌಂಟಿಂಗ್ ಮುಂದೂಡಿ ಆದೇಶ: ನವೆಂಬರ್ 2ಕ್ಕೆ ಇರೋದಿಲ್ಲ ಎಣಿಕೆ

1 min read
Spread the love

ನವದೆಹಲಿ: ರಾಜ್ಯದಲ್ಲಿ ನಡೆದಿದ್ದ ನಾಲ್ಕು ವಿಧಾನಪರಿಷತ್ ಮತಕ್ಷೇತ್ರಗಳ ಮತ ಎಣಿಕೆ ನವೆಂಬರ್ ಎರಡರ ಬದಲಾಗಿ, ನವೆಂಬರ್ 10ರಂದು ಮಾಡಲು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಈ ಹಿಂದೆ ಹೇಳಿದಂತೆ ರಾಜ್ಯದ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಚುನಾವಣೆ ಮೊನ್ನೆ 28 ರಂದು ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಎರಡನೇಯ ತಾರೀಖಿಗೆ ಮತ ಎಣಿಕೆ ನಡೆಯುತ್ತದೆ ಎಂದು ಹೇಳಲಾಗಿತ್ತು.

ಆದರೆ, ಶಿರಾ ಮತ್ತು ರಾಜರಾಜೇಶ್ವರಿನಗರದ ಉಪಚುನಾವಣೆ ನಡೆಯುತ್ತಿದ್ದು, ನವೆಂಬರ್ 3ರಂದೇ ಮತದಾನವಿತ್ತು. ಆ ಕಾರಣದಿಂದ ಎರಡು ಉಪಚುನಾವಣೆ ಮತ ಎಣಿಕೆಯ ದಿನದಂದೇ ಈಗಾಗಲೇ ಆಗಿರುವ ವಿಧಾನಪರಿಷತ್ ಚುನಾವಣೆಯ ಮತ ಎಣಿಕೆಗಳು ನಡೆಯಲಿವೆ.

ಈಗಾಗಲೇ ಚುನಾವಣೆ ಎದುರಿಸಿರುವ ಅಭ್ಯರ್ಥಿಗಳು ಮತ್ತೆ ಏಳು ದಿನಗಳವರೆಗೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.


Spread the love

Leave a Reply

Your email address will not be published. Required fields are marked *