Posts Slider

Karnataka Voice

Latest Kannada News

ನಾನು ಸತ್ತರೇ ಕುಂದಗೋಳದವರೇ ಕಾರಣ- ಸಂತ್ರಸ್ಥೆ ಹೇಳಿದ್ದೇನು ಗೊತ್ತಾ..!

1 min read
Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಜಾಗೃತ ಸಮಿತಿ ಹೆಸರಿನಲ್ಲಿರುವ ಕೆಲವರು ನನ್ನ ತೇಜೋವಧೆ ಮಾಡಲು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ನಾನು ಸಾಯುವ ಸ್ಥಿತಿಗೆ ಬಂದಿದ್ದೇನೆ. ಹಾಗೇನಾದರೂ ಆದರೆ, ಇದಕ್ಕೆ ಕುಂದಗೋಳದಲ್ಲಿನ ಸದಸ್ಯರೇ ಕಾರಣ ಎಂದು ಅತ್ಯಾಚಾರಕ್ಕೆ ಒಳಗಾದ ಮಹಿಳೆಯೋರ್ವಳು ಹೇಳಿದ್ದಾಳೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಮಹಿಳೆಯನ್ನ ಅತ್ಯಾಚಾರ ಯತ್ನ ನಡೆದಿತ್ತು. ಈ ಬಗ್ಗೆ ಆ ಜಿಲ್ಲೆಯಲ್ಲಿ ಪ್ರಕರಣವೂ ದಾಖಲಾಗಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ತನ್ನ ತೇಜೋವಧೆಯನ್ನ ನಿರಂತವಾಗಿ ಮಾಡಲಾಗುತ್ತಿದೆ ಎಂದು ಮಹಿಳೆ ಬೇಸರ ವ್ಯಕ್ತಪಡಿಸುತ್ತಿದ್ದಾಳೆ.

ಧಾರವಾಡ ಜಿಲ್ಲಾ ಜಾಗೃತಿ ಸಮಿತಿಯ ಬಸವರಾಜ ಸೇರಿದಂತೆ ಕೆಲವರು ನಿರಂತರವಾಗಿ ವಾಟ್ಸಾಫಗಳಲ್ಲಿ ಇಲ್ಲಬಾರದ ವದಂತಿಗಳನ್ನ ಹಬ್ಬಿಸುತ್ತಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದೇನೆ ಎಂದು ನೊಂದ ಮಹಿಳೆ ಹೇಳಿದರು.

ನನಗೆ ಎರಡು ಮಕ್ಕಳಿದ್ದು, ಅವರ ಮದುವೆ ಮಾಡಬೇಕಿದೆ. ಹೀಗೆ ಅಸಹ್ಯವಾಗಿ ಸುಳ್ಳು ವದಂತಿಯನ್ನ ತಡೆಯಬೇಕೆಂದು ನೊಂದ ಮಹಿಳೆ ಧಾರವಾಡ ಜಿಲ್ಲಾಧಿಕಾರಿಯವರನ್ನ ಮನವಿ ಮಾಡಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *