Posts Slider

Karnataka Voice

Latest Kannada News

ನಾಳೆ  52067 ಮತಗಳಲ್ಲಿ ಗೆಲ್ಲುವರಾರು: ಸಂಕನೂರು.. ಕುಬೇರಪ್ಪಾ.. ಗುರಿಕಾರ..?

1 min read
Spread the love

ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, 11 ಅಭ್ಯರ್ಥಿಗಳು ಗೆಲ್ಲುವರಾರು ಎಂಬ ಪ್ರಶ್ನೆ ಮೂಡಿದ್ದು, ಬಿಜೆಪಿ ಗೆಲುವಿಗೆ ಕಡಿವಾಣ ಹಾಕುವರಾರೂ ಎಂಬುದು ನಾಳೆ ಗೊತ್ತಾಗಲಿದೆ.

ಭಾರತೀಯ ಜನತಾ ಪಕ್ಷದ ಎಸ್.ವಿ.ಸಂಕನೂರ, ಕಾಂಗ್ರೆಸ್ ನ ಡಾ.ಕುಬೇರಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಸೇರಿದಂತೆ 11 ಅಭ್ಯರ್ಥಿಗಳ ಹಣೆಬರಹ ನಾಳೆ ಗೊತ್ತಾಗಲಿದ್ದು, ಫಲಿತಾಂಶದ ಮೇಲೆ ಎಲ್ಲರ ಗುರಿ ನೆಟ್ಟಿದೆ.

ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 52067 ಮತಗಳಷ್ಟು ಮತದಾನವಾಗಿದ್ದು, ಹಾವೇರಿ ಜಿಲ್ಲೆಯೊಂದರಲ್ಲೇ 16022 ಮತದಾನವಾಗಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರ, ಚುನಾವಣೆಯಿಂದ ಹಿಂದೆ ಸರಿದಿದ್ದು, ಸಧ್ಯ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಳೆದ ಬಾರಿ ವಿಜೇತರಾಗಿರುವ ಎಸ್.ವಿ.ಸಂಕನೂರ ಈ ಬಾರಿ ಎಷ್ಟು ಮತಗಳನ್ನ ಪಡೆಯುತ್ತಾರೆಂಬುದು ಯಕ್ಷಪ್ರಶ್ನೆಯಾಗಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ.ಕುಬೇರಪ್ಪ ಕೂಡಾ ತಾವೇನು ಕಡಿಮೆಯಿಲ್ಲ ಎನ್ನುವಂತಿದ್ದಾರೆ. ಇವರಿಬ್ಬರ ನಡುವೆ ನಾನೇನು ಕಡಿಮೆಯಿಲ್ಲ ಎನ್ನುವಂತೆ ಬಸವರಾಜ ಗುರಿಕಾರ ಕೂಡಾ ಕಣದಲ್ಲಿದ್ದಾರೆ. ಹೀಗಾಗಿ ನಾಳೆಯ ಫಲಿತಾಂಶದ ಮೇಲೆ ಎಲ್ಲರ ಕಣ್ಣೇಟ್ಟಿದೆ.


Spread the love

Leave a Reply

Your email address will not be published. Required fields are marked *