Posts Slider

Karnataka Voice

Latest Kannada News

ಉಮಾಶ್ರೀಯವರ ಕಾರು ಅಪಘಾತ ಪ್ರಕರಣ: ನವಲಗುಂದ ಮಹಿಳಾ ಹೆಲ್ತ್ ಆಫೀಸರ್ ಸಾವು

1 min read
Spread the love

ಹುಬ್ಬಳ್ಳಿ: ತಾಲೂಕಿನ ಬಂಡಿವಾಡ ಬಳಿ ನಡೆದಿದ್ದ ಇನ್ನೋವಾ ಮತ್ತು ಬಲೇನೋ ಕಾರಿನ ನಡುವೆ ನಡೆದ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನವಲಗುಂದ ತಾಲೂಕಿನ ಬೆಳಹಾರ ಹೆಲ್ತ್ ಆಫೀಸರ್ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಈ ದುರ್ಘಟನೆಯಲ್ಲಿ ಮೂವರು ಮೃತಪಟ್ಟಂತಾಗಿತು.

ಕಳೆದ ವಾರ ಗದಗನಿಂದ ಬರುತ್ತಿದ್ದ ಬಲೇನೋ ಕಾರಿನ ಉಮಾಶ್ರೀ ಮಾಲಿಕತ್ವದ ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸ್ಥಳದಲ್ಲಿಯೇ ಇಬ್ಬರೂ ಸಾವಿಗೀಡಾಗಿ, ಇನ್ನಿಬ್ಬರು ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಡಾ. ಸ್ಮಿತಾ ಕಟ್ಟಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಈ ಮೂಲಕ ಮಾರುತಿ ಸುಜುಕಿ ಬಲೇನೋ ಕಾರಿನಲ್ಲಿನ ಮೂವರು ಸಾವಿಗೀಡಾದಂತಾಗಿದೆ.

ಘಟನೆಯ ದಿನ ಡಾ.ಸ್ಮಿತಾ ಕಟ್ಟಿ ಅವರ ತಾಯಿ ಶೋಭಾ ಕಟ್ಟಿ, ಚಾಲಕ ಸಂದೀಪ ವಿಭೂತಿಮಠ ಸಾವಿಗೀಡಾಗಿದ್ದರು. ಉಮಾಶ್ರೀಯವರ ಇನ್ನೋವಾ ಚಾಲಕ ಶಿವುಕುಮಾರ ಬಿಡನಾಳಗೂ ಕೂಡಾ, ಸಣ್ಣಪುಟ್ಟ ಗಾಯಗಳು ಆಗಿದ್ದವು. ಆದರೆ, ಘಟನೆಯಲ್ಲಿ ಡಾ.ಸ್ಮಿತಾ ಕಟ್ಟಿ ತೀವ್ರವಾಗಿ ಗಾಯಗೊಂಡು, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಐದು ದಿನದ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಘಟನೆಯ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಅಪಘಾತದ ಬಗ್ಗೆ ಸ್ವತಃ ಉಮಾಶ್ರೀ ಕಣ್ಣೀರು ಹಾಕಿದ್ದನ್ನ ಇಲ್ಲಿ ಸ್ಮರಿಸಬಹುದು.


Spread the love

Leave a Reply

Your email address will not be published. Required fields are marked *