Posts Slider

Karnataka Voice

Latest Kannada News

ಮಸ್ಕಿಯಲ್ಲಿ ತೇಲಿ ಬಂದ ಶವ- ಕೈಕಾಲು ಕಟ್ಟಿ ನೀರಲ್ಲಿ ಹಾಕಿದ್ಯಾರು..?

1 min read
Spread the love

ರಾಯಚೂರು: ಸುಮಾರು ಹದಿನೈದರಿಂದ ಹದಿನಾರು ವರ್ಷದ ಬಾಲಕನ ಕೈ ಕಾಲು ಕಟ್ಟಿ ಕೊಲೆ ಮಾಡಲಾಗಿದ್ದು, ಆ ಶವವಿಂದು ಮಸ್ಕಿ ಪಟ್ಟಣದ ಸಮೀಪದಲ್ಲಿರುವ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ತೇಲಿ ಬಂದಿದ್ದು, ಉದ್ದೇಶಪೂರ್ವಕವಾಗಿ ನಡೆದಿರುವ ಈ ಘಟನೆಯನ್ನೀಗ ಪೊಲೀಸರು ಭೇದಿಸಬೇಕಿದೆ.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ತುಂಗಭದ್ರಾ ಎಡದಂಡೆ ನಾಲೆ 52 ನೇ ಮೈಲ್ ಬಳಿ ತೇಲಿ ಬಂದಿರುವ ಈ ಶವವನ್ನ ಇಂದು ಕೆಲವರು ನೋಡಿದ್ದು, ಕಾಲು ಮತ್ತು ಕೈಗಳನ್ನ ಕಟ್ಟಿ ಕೊಲೆ ಮಾಡಿ ಶವವನ್ನ ನಾಲೆಯಲ್ಲಿ ಒಗೆಯಲಾಗಿದೆ ಎಂದು ಗೊತ್ತಾಗುತ್ತದೆ.

ಈ ಬಾಲಕನ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲವಾದರೂ, ದೃಶ್ಯಗಳನ್ನ ನೋಡಿದಾಗ ದುರುದ್ದೇಶದಿಂದಲೇ ಬಾಲಕನನ್ನ ಕೊಲೆ ಮಾಡಿ ಶವವನ್ನ ನಾಲೆಯಲ್ಲಿ ಒಗೆದಿರುವುದಾಗಿ ತಿಳಿದು ಬರುತ್ತದೆ. ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಶವವನ್ನ ನಾಲೆಯಿಂದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಲಕನ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

ನಾಲೆಯಲ್ಲಿ ತೇಲಿ ಬಂದ ಬಾಲಕನ ಶವವನ್ನ ನೋಡಿ ಕೆಲವರು ಗಾಬರಿಯಿಂದ ಸ್ಥಳದಿಂದ ಪರಾರಿಯಾಗಿದ್ದಾರೆ. ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಮಸ್ಕಿ ಠಾಣೆಯ ಪೊಲೀಸರು ಮುಂದಿನ ತನಿಖೆಯನ್ನ ಕೈಗೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *