Posts Slider

Karnataka Voice

Latest Kannada News

ಸಂತೋಷ ಚವ್ಹಾಣ ಅಧ್ಯಕ್ಷತೆಯಲ್ಲಿ ಬೂತ್ ಉಸ್ತುವಾರಿ ನೇಮಕ

1 min read
Spread the love

ಹುಬ್ಬಳ್ಳಿ: ಕರ್ನಾಟಕ ವಿಧಾನ ಪರಿಷತ್ ಚುನಾವಣೆ- 2020  ಪಶ್ಟಿಮ ಪದವೀಧರರ ಚುನಾವಣೆಯ ಅಂಗವಾಗಿ ಪಕ್ಷದ ಕಚೇರಿಯಲ್ಲಿಂದು ಮಹಿಳಾ ಮೋರ್ಚಾದ  ಪೂರ್ವ ಸಿದ್ದತಾ ಸಭೆ ನಡೆಯಿತು.

ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ ಅಧ್ಯಕ್ಷತೆಯಲ್ಲಿ, ಪಕ್ಷದ ಪ್ರಮುಖರುಗಳನ್ನು ವಿವಿಧ ಬೂತ್ ಗಳ ಉಸ್ತುವಾರಿಗಳನ್ನಾಗಿ ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಪ್ರಚಾರಾರ್ಥವಾಗಿ ಮೂರು ತಂಡ ಗಳಲ್ಲಿ  ಪ್ರತಿಯೊಂದು ಶಾಲೆ, ಕಾಲೇಜು, ಸರಕಾರಿ ಇಲಾಖೆಯ ಆಫೀಸರ್ ಮತ್ತು ಬ್ಯಾಂಕ್ ಗಳಿಗೆ ಭೇಟಿ ನೀಡಲು ತೀರ್ಮಾನಿಸಿ,  ಹೆಸರುಗಳನ್ನ ಘೋಷಣೆ ಮಾಡಲಾಯಿತು.

NWKSRTC ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವುಕಾರ ಮಾತನಾಡಿ, ಉಸ್ತುವಾರಿಗಳು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಚುನಾವಣೆ ನಿರ್ವಹಣೆ ಮಾಡಬೇಕು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣಾ ಮಜ್ಜಗಿ,  ದತ್ತಮೂರ್ತಿ ಕುಲಕರ್ಣಿ, ರಾಜ್ಯ ಮಹಿಳಾ ಮೋರ್ಚಾದ ಕಾರ್ಯದರ್ಶಿ  ಮೇನಕಾ ಹುರಳಿ,  ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ  ರೂಪಾ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಮಾ ಲದವಾ, ಮೀನಾಕ್ಷಿ ಒಂಟಮೂರಿ, ಉಮಾ ಮುಕುಂದ, ರಾಜ್ಯ SC ಮೊರ್ಚಾದ ಕಾರ್ಯದರ್ಶಿ ಮಹೇಂದ್ರ  ಕೌತಾಳ, ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಗೋಪಾಲ ಬದ್ದಿ,  ವಿರೂಪಾಕ್ಷ ರಾಯನಗೌಡರ,  ಮಹಿಳಾ ಮೋರ್ಚಾ  ಪ್ರಧಾನ ಕಾರ್ಯದರ್ಶಿ  ಭಾರತಿ ಟಪಾಲ, ಅಕ್ಕಮ್ಮಾ ಹೆಗಡೆ, ವಿಜಯಲಕ್ಷ್ಮಿ ತಿಮೂಲಿ, ಲೀಲಾವತಿ ಪಾಸ್ತೆ,  ಸಂಗೀತಾ ಇಜಾರದ, ಅನ್ನಪೂರ್ಣ ಪಾಟೀಲ, ರತ್ನಾ ಚೌಶಟ್ಟಿ,  ಜಯಶ್ರೀ ನಿಂಬರ್ಗಿ, ಇಂದುಮತಿ ಚವ್ಹಾಣ, ವಿಜಯಾ ಗುಡಗೇರಿ, ಸುಮಾ ಶಿವನಗೌಡರ, ಭುವನೇಶ್ವರಿ ಪಿಲ್ಲೆ, ದೇವಿಕಾ ಚಲವಾದಿ, ಭಾರತಿ ಕಾಂಬಳೆ,  ಸೂನಿ ಪಿರಂಗಿ, ಅರ್ಚನಾ K  ಸೇರಿದಂತೆ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *