ಬೆಳಗಲಿ ಕ್ರಾಸ್ ಬಳಿ ಮೂರು ವಾಹನಗಳ ನಡುವೆ ಡಿಕ್ಕಿ-ಮೂವರಿಗೆ ಗಾಯ- ಓರ್ವನ ಸ್ಥಿತಿ ಗಂಭೀರ
1 min read![](https://karnatakavoice.com/wp-content/uploads/2021/02/WhatsApp-Image-2020-11-08-at-7.23.48-PM-1-1024x768.jpeg)
ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 4ದಲ್ಲಿ ಮೂರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾದ ಘಟನೆ ಹುಬ್ಬಳ್ಳಿ ಸಮೀಪದ ಬೆಳಗಲಿ ಕ್ರಾಸ್ ಬಳಿ ಸಂಭವಿಸಿದೆ.
ಕೇರಳ ಗುರುವಾಯೂರು ಮೂಲದ ರಾಜಶ್ರೀ ಎನ್ನುವವರಿಗೆ ಸೇರಿದ ಕಾರಿಗೆ ಹುಬ್ಬಳ್ಳಿಯ ಕೃಷ್ಣಾ ನಾಗಣ್ಣನವರಗೆ ಸೇರಿದ ಬೈಕ್ ಹಾಗೂ ಇನ್ನೋಂದು ಸ್ಕೂಟಿ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನಿಗೆ ತೀವ್ರವಾದ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ.
ಬೆಳಗಲಿ ಕ್ರಾಸ್ ನಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಿದ್ದು, ಇಂದು ಕೂಡಾ ಕಾರು ವೇಗವಾಗಿ ಬರುತ್ತಿದ್ದಾಗ ಅಕ್ಕ-ಪಕ್ಕದ ಕ್ರಾಸನಿಂದ ಬರುವ ಎರಡು ದ್ವಿಚಕ್ರ ವಾಹನಗಳು ಬಂದು ಡಿಕ್ಕಿ ಹೊಡೆದಿವೆ. ಕಾರು ಕೂಡಾ ಸಂಪೂರ್ಣ ಜಖಂಗೊಂಡಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ರಸ್ತೆ ಅಪಘಾತದಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಸಮಸ್ಯೆಯನ್ನ ಬಗೆಹರಿಸಿ, ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.