Posts Slider

Karnataka Voice

Latest Kannada News

ಕಲಘಟಗಿಯಲ್ಲಿ ಅಪಘಾತ: ನವಲಗುಂದ ಪುರಸಭೆ ಸಿಬ್ಬಂದಿ ದುರ್ಮರಣ- ಇನ್ನಿಬ್ಬರ ಸ್ಥಿತಿ ಗಂಭೀರ

1 min read
Spread the love

ಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದ ಸರಕಾರಿ ಆಸ್ಪತ್ರೆಯ ಬಳಿ ನಡೆದ ಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾದ ಘಟನೆ ನಡೆದಿದೆ.

ನವಲಗುಂದ ಪುರಸಭೆಯ ಸಿಬ್ಬಂದಿಯಾಗಿರುವ ಮಲ್ಲೇಶಿ ಹರಿಜನ ಮೃತಪಟ್ಟಿದ್ದು, ಇವರ ಜೊತೆಗಿದ್ದ ಶರಣಯ್ಯ ಶಿವಯ್ಯ ಮಲಿಂಗನವರ ಸಣ್ಣ-ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ನವಲಗುಂದದಲ್ಲಿ ಕೆಲಸ ಮುಗಿಸಿಕೊಂಡು ಕಲಘಟಗಿ ವಿದ್ಯಾನಗರದಲ್ಲಿರುವ ತಮ್ಮ ಮನೆಗೆ ಬರುವಾಗ ಈ ಘಟನೆ ನಡೆದಿದೆ.

ಮಲ್ಲೇಶ ಹರಿಜನರಿಗೆ ಎದುರಾಗಿ ಬಂದ ಬೈಕಿನಲ್ಲಿದ್ದ ತುಮರಿಕೊಪ್ಪ ಗ್ರಾಮದ ಮಲ್ಲೇಶಿ ಶಿವಾನಂದ ಕಮ್ಮಾರ ಹಾಗೂ ಚೆನ್ನವೀರಯ್ಯ ಹಾರೂಗೇರಿ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ ಮಾಡಲಾಗಿದೆ.

ಪ್ರಕರಣ ಕಲಘಟಗಿ ಠಾಣೆಯಲ್ಲಿ ದಾಖಲಾಗಿದ್ದು, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *