Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಬೃಹತ್ ಎಸಿಬಿ ದಾಳಿ..!

1 min read
Spread the love

ಹುಬ್ಬಳ್ಳಿ: ನಗರದ ಅಕ್ಷಯ ಪಾರ್ಕ ಬಳಿಯಿರುವ ರಾಜೀವಗಾಂಧಿನಗರದ ಮನೆಯೊಂದರ ಮೇಲೆ ಬೆಳಿಗಿನ ಜಾವವೇ ಎಸಿಬಿ ದಾಳಿ ನಡೆದಿದ್ದು, ಬೃಹತ್ ಭೇಟೆಯನ್ನ ಅಧಿಕಾರಿಗಳು ಆಡಿದ್ದಾರೆಂದು ಹೇಳಲಾಗುತ್ತಿದೆ.

ಎಕ್ಸಿಕ್ಯೂಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಎನ್ನುವವರ ಮನೆ ಹುಬ್ಬಳ್ಳಿಯಲ್ಲಿದ್ದು ಕೆಲವು ವರ್ಷಗಳ ಹಿಂದೆ, ಇದೇ ದೇವರಾಜ ಶಿಗ್ಗಾಂವ ಧಾರವಾಡದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ನೀರಾವರಿ ಇಲಾಖೆಯಲ್ಲಿದ್ದ ದೇವರಾಜ ಅವರನ್ನ ಧಾರವಾಡದಿಂದ ವರ್ಗಾವಣೆ ಮಾಡಿದ ನಂತರ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.

ಇಂದು ಮೂರು ವಾಹನಗಳೊಂದಿಗೆ ಆಗಮಿಸಿರುವ ಎಸಿಬಿ ತಂಡ ಮನೆಯ ಪ್ರತಿ ಕಡೆಯೂ ತಪಾಸಣೆ ಮಾಡುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

ಎಸಿಬಿ ದಾಳಿ ಆರಂಭವಾದಾಗಿಂದ ಮನೆಯ ಯಾವುದೇ ಸದಸ್ಯರನ್ನ ಹೊರಗೆ ಬಿಟ್ಟಿಲ್ಲ. ಅಷ್ಟೇ ಅಲ್ಲ, ಹಲವು ದಾಖಲಾತಿಗಳನ್ನ ಕೇಳಿ ಪಡೆಯುವ ಪ್ರಯತ್ನವನ್ನ ಅಧಿಕಾರಿಗಳು ಮಾಡುತ್ತಿದ್ದಾರೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *