Posts Slider

Karnataka Voice

Latest Kannada News

ಹಾವಾ..? ಮುಂಗುಸಿನಾ.. ಇಂತಹ ವೀಡಿಯೋವನ್ನ ಜೀವಮಾನದಲ್ಲೆಂದು ನೋಡಿರಲು ಸಾಧ್ಯವೇ ಇಲ್ಲಾ..!

1 min read
Spread the love

ದಾವಣಗೆರೆ: ಮುಂಗುಸಿ ಕಂಡರೇ ಹಾವು ಹೆದರಿಕೊಂಡು ಮಾರೂ ದೂರ ಹೋಗುವುದನ್ನ ನಾವು ನೀವೂ ನೋಡಿದ್ದೇವೆ. ಆದ್ರೆ ಇಲ್ಲೊಂದು ಘಟನೆಯಲ್ಲಿ ಹಾವಿಗೆ ಮುಂಗುಸಿ ತನ್ನ ಪ್ರಾಣ ಉಳಿಸಿಕೊಳ್ಳಲು ಹರಸಾಹಸಪಟ್ಟಂತ ಘಟನೆ  ದಾವಣಗೆರೆ ತಾಲೂಕು ಹೊಸ ಕುಂದುವಾಡ ಗ್ರಾಮದ ಬಳಿ ನಡೆದಿದೆ.

ಹಾವನ್ನ ಹಿಡಿಯಲು ಬಂದ ಮುಂಗುಸಿ, ಹಾವಿನೊಂದಿಗೆ ಕಾದಾಡಿದೆ, ಈ ವೇಳೆ ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಹಾವು ಕೂಡ ಮುಂಗಸಿಯೊಂದಿಗೆ ಕಾದಾಡಿ ಕಾದಾಡಿ ನಂತರ, ಮುಂಗಸಿಯನ್ನ ತನ್ನ ಬಾಲದಲ್ಲಿ ಸುತ್ತು ಹಾಕಿಕೊಂಡಿದೆ. ಈ ವೇಳೆ ಮುಂಗುಸಿ ಎಷ್ಟೇ ಪ್ರಯತ್ನಪಟ್ಟರು, ಹಾವಿನಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ, ಅನಿವಾರ್ಯವಾಗಿ ಮುಂಗುಸಿಯೇ ತನ್ನ ಪ್ರಾಣ ಉಳಿಸಿಕೊಳ್ಳಲು ಸತತ ಅರ್ಧ ಗಂಟೆ ಪರದಾಡಿ ನಂತರ ಬಲವಂತವಾಗಿ ಪೊದೆಯಲ್ಲಿ ಓಡಿ ಹೋಗಿದೆ. ಒಟ್ಟಾರೆ ಹಾವು ಮುಂಗುಸಿ ಕಾದಾಟದ ವೀಡಿಯೋ ಈಗ ಮೊಬೈಲ್ ನಲ್ಲಿ ತುಂಬಾ ಹರಿದಾಡುತ್ತಿದೆಯಲ್ಲದೆ, ಜನರ ಆಶ್ಚರ್ಯಕ್ಕೂ ಕಾರಣವಾಗಿದೆ.


Spread the love

Leave a Reply

Your email address will not be published. Required fields are marked *