ವಿನಯ ಕುಲಕರ್ಣಿ ನೋಡಲು ಹೋದ ಕಟ್ಟಾ ಅಭಿಮಾನಿ ಅರ್ಧ ದಾರಿಯಲ್ಲಿ ಪ್ರಾಣಬಿಟ್ಟ…!

ತುಮಕೂರು: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಭೇಟಿಯಾಗಲು ರಾಜಧಾನಿಯತ್ತ ಹೊರಟಿದ್ದ ಕಟ್ಟಾ ಅಭಿಮಾನಿಯೋರ್ವ ಹೃದಯಾಘಾತದಿಂದ ತುಮಕೂರು ಬಳಿ ಪ್ರಾಣ ಕಳೆದುಕೊಂಡ ಘಟನೆ ಸಂಭವಿಸಿದೆ.

ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಪರಮೇಶ್ವರ ಗಾಣಗೇರ ಎಂಬುವವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಧಾರವಾಡ ಜಿಲ್ಲೆಗೆ ಬರಲು ಅವಕಾಶವಿಲ್ಲದ ಕಾರಣ ಅವರ ಅಭಿಮಾನಿಗಳು ಅವರಿದ್ದಲ್ಲಿಗೆ ಹೋಗಿ ಭೇಟಿಯಾಗುತ್ತಿದ್ದಾರೆ.
ಮರೇವಾಡದಿಂದ ಹೊರಟಿದ್ದ ಪರಮೇಶ್ವರ, ಸಾವಿನ ಸುದ್ದಿ ತಿಳಿಯುತ್ತಿದ್ದ ಹಾಗೇ ತುಮಕೂರಿಗೆ ಆಗಮಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ, ಅಭಿಮಾನಿಯ ಅಂತಿಮ ದರ್ಶನ ಪಡೆದು ಪಾರ್ಥಿವ ಶರೀರವನ್ನ ಗ್ರಾಮಕ್ಕೆ ಕಳಿಸುವ ವ್ಯವಸ್ಥೆ ಮಾಡಿದರು.