ಹುಬ್ಬಳ್ಳಿ: ವಿದ್ಯಾನಗರ ಠಾಣೆಯ ASI ಎಂ.ಜಿ.ಡಲಾಯತ್ ಅನಾರೋಗ್ಯದಿಂದ ನಿಧನ… ನಾಗನೂರಲ್ಲಿ ಇಂದು ಅಂತ್ಯಕ್ರಿಯೆ…
ತೀವ್ರ ಅನಾರೋಗ್ಯದಿಂದ ಎಎಸ್ಐ ಮಕ್ತುಂಸಾಬ ಡಲಾಯಿತ ನಿಧನ
ಹುಬ್ಬಳ್ಳಿ: 1994ರ ಬ್ಯಾಚ್ನ ಪೊಲೀಸ್ ಅಧಿಕಾರಿಯಾಗಿದ್ದ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯ ಎಎಸ್ಐ ಮಕ್ತುಂಸಾಬ ಗಫಾರಸಾಬ ಡಲಾಯಿತ (ಎಂ.ಜಿ. ಡಲಾಯಿತ) ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ಸತ್ತೂರ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದ ಕಾರಣ ಕೊನೆಯುಸಿರೆಳೆದಿದ್ದಾರೆ.

ಮೂಲತಃ ನವಲಗುಂದ ತಾಲೂಕಿನ ನಾಗನೂರ ಗ್ರಾಮದವರಾದ ಮಕ್ತುಂಸಾಬ ಡಲಾಯಿತ ಅವರು 1994ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಕಾರವಾರದಲ್ಲಿ ಪೊಲೀಸ್ ತರಬೇತಿ ಪಡೆದಿದ್ದ ಅವರು, ನಂತರ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಪದೋನ್ನತಿ ಹೊಂದಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದರು.
ಪ್ರಸ್ತುತ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಲಾಯಿತ ಅವರು, ಹುಬ್ಬಳ್ಳಿಯ ಆರ್ಟಿಒ ಕಚೇರಿ ಬಳಿಯ ಆಲಂನಗರದಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮೃತ ಎಎಸ್ಐ ಮಕ್ತುಂಸಾಬ ಡಲಾಯಿತ ಅವರ ಅಂತ್ಯಕ್ರಿಯೆ ನವಲಗುಂದ ತಾಲೂಕಿನ ಸ್ವಗ್ರಾಮ ನಾಗನೂರದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
