Posts Slider

Karnataka Voice

Latest Kannada News

ಟೈಯರ್, ಟ್ಯೂಬ್ ಕಳ್ಳರನ್ನ ಬಂಧನ ಮಾಡಿದ ಗೋಕುಲ ಠಾಣೆ ಪೊಲೀಸರು..!

1 min read
Spread the love

ಹುಬ್ಬಳ್ಳಿ: ಗೋಕುಲ ರಸ್ತೆಯ ಇಂಡಸ್ಟ್ರೀಯಲ್ ಎಸ್ಟೇಟನಲ್ಲಿನ ಶ್ರೀ ಶೀವಶಕ್ತಿ ಎಂಟರ್ ಪ್ರೈಜಿಸ್ ಗೋಡೌನದಲ್ಲಿ ಟೈಯರ್, ಟ್ಯೂಬ್ ಮತ್ತು ಪ್ಲ್ಯಾಪಗಳನ್ನ ಕಳ್ಳತನ ಮಾಡಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಗೋಕುಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನ ಗೋಕುಲ ರಸ್ತೆಯ ಮಾರುತಿನಗರದ ಹಳ್ಳೇಪ್ಪ ದೇವಪ್ಪ ಪೂಜಾರ ಮತ್ತು ಗದಗ-ಬೆಟಗೇರಿ ನರಸಾಪೂರದ ವಸೀಮ ಮಕ್ತುಮಸಾವ ಸೈದಾಪೂರ ಎಂದು ಗುರುತಿಸಲಾಗಿದ್ದು, ಟ್ರಕ್ಕಿನ 11 ಟೈಯರ್, ಟ್ಯೂಬ್ ಹಾಗೂ ಪ್ಲ್ಯಾಪಗಳನ್ನ ವಶಕ್ಕೆ ಪಡೆಯಲಾಗಿದೆ. ಇವುಗಳ  ಮೌಲ್ಯ ಅಂದಾಜು 2.10.000 ರೂಪಾಯಿ ಎನ್ನಲಾಗಿದೆ.

ಗೋಡೌನದ ಸಿಮೆಂಟ್ ಸೀಟಿನ ನಟ್ ಬೋಲ್ಟ್ ಬಿಚ್ಚಿ ಗೋಡೌನದಲ್ಲಿ ಇಳಿದು ಕಳ್ಳತನ ಮಾಡಿರುವುದು ಬಂಧಿತರಿಂದ ಗೊತ್ತಾಗಿದೆ. ಪೊಲೀಸ್ ಕಮೀಷನರ್ ಲಾಬುರಾಮ್, ಡಿಸಿಪಿಗಳಾದ ಕೆ.ರಾಮರಾಜನ್, ಆರ್.ಬಿ.ಬಸರಗಿ, ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಗೋಕುಲ ಠಾಣೆಯ ಇನ್ಸಪೆಕ್ಟರ್ ಜಗದೀಶ ಹಂಚಿನಾಳ, ಸಿಬ್ಬಂದಿಗಳಾದ ಎಎಸ್ಐ ಎಚ್.ಎನ್.ವೆಂಕಣ್ಣನವರ, ಬಸವರಾಜ ಬೆಳಗಾವಿ, ರಾಜು ಹೊಂಕಣನವರ, ಮಹಾದೇವ ಹೊನ್ನಪ್ಪನವರ, ಸುಲೇಮಾನ ಚೋಪದಾರ, ಮಹೇಶ ಬೆನ್ನೂರ, ಸಂಜೀವರೆಡ್ಡಿ ಕಣಬೂರ ಆರೋಪಿಗಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿತರಿಗೆ ಸಹಕಾರ ನೀಡಿರುವ ಇನ್ನುಳಿದ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದು, ಕಳ್ಳತನವಾಗಿರುವ ಇನ್ನೂಳಿದ ಮಾಲನ್ನ ವಶಪಡಿಸಿಕೊಳ್ಳಲು ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.


Spread the love

Leave a Reply

Your email address will not be published. Required fields are marked *