Posts Slider

Karnataka Voice

Latest Kannada News

ಶಿಕ್ಷಕರೇ ನಾಳೆಯಿಂದ ನಿಮಗೆ ಶಾಲೆ ಶುರು: ಸರಕಾರದ ಆದೇಶದಲ್ಲೇನಿದೆ ಗೊತ್ತೆ..?

1 min read
Spread the love

ಬೆಂಗಳೂರು: ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆಯನ್ನ ನೀಡಲಾಗಿತ್ತಾದರೂ, ನಾಳೆಯಿಂದಲೇ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ನಾಳೆ ರಾಜ್ಯದ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಕೋವಿಡ್-19ರ ಪ್ರಮಾಣ ಕಾರ್ಯಚರಣಾ ವಿಧಾನದ ಅನುಸಾರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದು, ಮಹರ್ಷಿ ವಾಲ್ಮೀಕಿ ಜಯಂತಿಯನ್ನ ಆಚರಿಸುವಂತೆ ಸೂಚಿಸಲಾಗಿದೆ.

ನವೆಂಬರ್ 1 ರಂದು ಇದೇ ಥರದಲ್ಲಿ ರಾಜ್ಯೋತ್ಸವ ಆಚರಣೆ ಮಾಡುವಂತೆಯೂ ಸೂಚನೆ ನೀಡಲಾಗಿದೆ. ದಸರಾ ರಜೆಯಲ್ಲಿದ್ದ ಶಿಕ್ಷಕ ಸಮೂಹ ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಸೂಕ್ತವಾದ ಕ್ರಮಗಳನ್ನ ತೆಗೆದುಕೊಂಡು ಆಚರಣೆಗಳನ್ನ ಮಾಡಲು ಸೂಚನೆ ನೀಡಿದ್ದರಿಂದ, ಶಿಕ್ಷಕ ಸಮೂಹ ಸರಕಾರದ ಆದೇಶವನ್ನ ಪಾಲನೆ ಮಾಡಿ, ಆರೋಗ್ಯವನ್ನ ಕಾಪಾಡಿಕೊಳ್ಳಬೇಕಿದೆ.


Spread the love

Leave a Reply

Your email address will not be published. Required fields are marked *