Posts Slider

Karnataka Voice

Latest Kannada News

ಹೂಗಾರಿಂದ “ಪತ್ರಿ” ಪಡೆದಿದ್ದ ಪಿಡಿಓ ಅಮಾನತ್ತು

Spread the love

ಧಾರವಾಡ: ಭ್ರಷ್ಟಾಚಾರ ನಿಗ್ರಹ ದಳದಿಂದ ಬಂಧಿತರಾಗಿದ್ದ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನ ಧಾರವಾಡ ಜಿಲ್ಲಾ ಪಂಚಾಯತಿ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.

ಗ್ರಾಮ ಪಂಚಾಯತಿ ಪಿಡಿಓ ಪುಷ್ಪಾವತಿ ಮೇದಾರ ಹುಬ್ಬಳ್ಳಿ ಮೂಲದ ಸಾಗರ ಹೂಗಾರ ಎನ್ನುವವರಿಂದ 20 ಸಾವಿರ ರೂಪಾಯಿಗಳನ್ನ ಪತಿ ಮಹಾಂತೇಶ ಮೂಲಕ ಪಡೆಯುವ ಸಮಯದಲ್ಲಿ ಎಸಿಬಿ ದಾಳಿಗೆ ಒಳಗಾಗಿದ್ದರು.

ಹಣದ ಸಮೇತ ದಂಪತಿಗಳನ್ನ ಬಂಧನ ಮಾಡಿದ್ದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಕಾರಾಗೃಹಕ್ಕೆ ಹಾಕಿದ್ದರು. ಇದೀಗ ಜಾಮೀನು ಪಡೆದುಕೊಂಡು ಬಂದಿರುವ ದಂಪತಿಗಳಿಗೆ, ಹೊಸ ಶಾಕ್ ನ್ನ ಇಲಾಖೆ ನೀಡಿದೆ.

ಬಂಧನ ಮಾಡಿದ ದಿನದಿಂದಲೇ ಪಿಡಿಓ ಪುಷ್ಪಾವತಿ ಮೇದಾರರನ್ನ ಅಮಾನತ್ತು ಮಾಡಿರುವ ಜಿಲ್ಲಾ ಪಂಚಾಯತಿ, ಜೀವನಾಂಶ ಭತ್ಯೆ ಪಡೆಯುವ ಆದೇಶವನ್ನ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *