Posts Slider

Karnataka Voice

Latest Kannada News

ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ- ನೂತನ ವಿಧಾನಪರಿಷತ್ ಸದಸ್ಯ

1 min read
Spread the love

ಕಲಬುರಗಿ: ರಾಜ್ಯ ಸರಕಾರದಲ್ಲಿ ಹೊಸ ಮಂತ್ರಿ ಮಂಡಲ ರಚನೆಯಾದರೂ ನಾನು ಮಾತ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಇತ್ತೀಚೆಗೆ ಅವಿರೋಧವಾಗಿ ವಿಧಾನಪರಿಷತ್ ಸದಸ್ಯರಾಗಿರುವ ಸುನೀಲ ವಲ್ಯಾಪುರೆ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುನೀಲ ವಲ್ಯಾಪುರೆ, ಕಲಬುರಗಿ ಜಿಲ್ಲೆಯಲ್ಲಿ 5 ಬಿಜೆಪಿ ಶಾಸಕರು ಇರುವುದರಿಂದ ಯಾರಿಗೆ ಸಚಿವ ಸ್ಥಾನ ನೀಡಿದರು ನನಗೆ ಸಂತೋಷ. ಕಲಬುರಗಿ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡುವಂತೆ ಸಿಎಂ ಬಿಎಸ್ವೈ ಬಳಿ ಮನವಿ ಮಾಡುವೆ. ಚಿಂಚೋಳಿ ಕ್ಷೇತ್ರದ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸುವೆ ಎಂದು ಹೇಳಿದರು.

ನೂತನವಾಗಿ ವಿಧಾನಪರಿಷತ್ ಗೆ ಆಯ್ಕೆಯಾದ ಬಹುತೇಕರಿಗೆ ಮಂತ್ರಿ ಸ್ಥಾನ ಸಿಗತ್ತೆ ಎಂದು ಈಗಾಗಲೇ ಸುದ್ಧಿಯಾಗಿದ್ದು, ಇದನ್ನ ಸುನೀಲ ವಲ್ಯಾಪುರೆ ಅಲ್ಲಗಳೆದಂತಾಗಿದೆ.


Spread the love

Leave a Reply

Your email address will not be published. Required fields are marked *

You may have missed