Karnataka Voice

Latest Kannada News

ಮುರುಘಾಮಠದಲ್ಲಿ ಸ್ವಚ್ಚ ಸಂಡೇ ಅಭಿಯಾನ


Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
Spread the love

ಧಾರವಾಡ: ಭಾರತೀಯ ಜನತಾ ಪಕ್ಷದ ಧಾರವಾಡ ನಗರ-71 ಯುವಮೋರ್ಚಾ ಘಟಕದ ವತಿಯಿಂದ ಇಂದು ಬೆಳಿಗ್ಗೆ 7 ಗಂಟೆಗೆ   ಧಾರವಾಡದ ವಾರ್ಡ್ ನಂಬರ್ 6 ರ ಸುಪ್ರಸಿದ್ಧ ಮುರುಘಾಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಸಂಪೂರ್ಣ ಮಠದ ಆವರಣವನ್ನು ಮಠದ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಯುವಮೋರ್ಚಾ ಅಧ್ಯಕ್ಷ  ಶಕ್ತಿ ಹಿರೇಮಠ ನೇತೃತ್ವದಲ್ಲಿ ಸ್ವಚ್ಚತಾ  ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಿರಣ  ಉಪ್ಪಾರ್, ಮಂಡಳ ಅಧ್ಯಕ್ಷ ಸುನೀಲ ಮೋರೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ  ಸಿದ್ದು ಕಲ್ಯಾಣ ಶೆಟ್ಟಿ,  ಮಂಡಳ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಾಯಕ ಗೊಂಧಳಿ, ಮಹಿಳಾ ಮೋರ್ಚಾ ಅದ್ಯಕ್ಷ ರಾಜೇಶ್ವರಿ ಅಳಗವಾಡಿ, ಸ್ವಚ್ಚ ಭಾರತ ಜಿಲ್ಲಾ ಸಂಚಾಲಕ ಸಹ ಸಂಚಾಲಕ ಪ್ರಕಾಶ್ ಇಂಗಳೆ, ಪಕ್ಷದ ಹಿರಿಯರಾದ ಪುಷ್ಪಾ ನವಲಗುಂದ, ನಿಂಗಪ್ಪ ಸಪೂರಿ, ಜಗದೀಶ್ ಚಿಕ್ಕಮಠ, ಕಪಿಲ ಶಿರಹಟ್ಟಿ, ಲತಾ ಕೆರಿಮಠ, ಮಾದೇವಿ ಕೌದಿ, ಮಾಲತಿ ಬರಗಿ,  ರಾಹುಲ್ ಅಷ್ಟಗಿ ಯುವಮೋರ್ಚಾ ಪ್ರಮುಖ ಪದಾಧಿಕಾರಿಗಳಾದ ರಾಘವೇಂದ್ರ ತುಪ್ಪದ, ಕಾರ್ತಿಕ ಪೂಜಾರ್, ಸಚಿನ ಚವಾಣ್, ಸೂರಂಜನ್ ಗೂಂಡೆ, ಸಾಗರ್ ಜೋಶಿ, ರಾಜೇಶ್ ನಾಯ್ಕ್ , ಅಮೃತ ಹೆಬ್ಬಳ್ಳಿ, ರವಿ ಮಾಳಗಾರ್,  ವಿನಾಯಕ   ಭೋಳೆ, ಪೃಥ್ವಿ ಚಿತಗುಬ್ಬಿ,  ರೋಹಿತ, ಸಾಯಿಪ್ರಸಾದ, ಗಂಗನಗೌಡ, ನಿಂಗನಗೌಡ, ಹೇಮಂತ್, ನಾಗರಾಜ್ ಹಾಗೂ ಎಲ್ಲ ಯುವಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *