Karnataka Voice

Latest Kannada News

ಸರಕಾರಿ ಶಾಲೆ ವಿದ್ಯಾರ್ಥಿಗೆ ಚಾಕು: ಆರು ಯುವಕರ ಮೇಲೆ ಪ್ರಕರಣ ದಾಖಲು..!


Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
Spread the love

ಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ 9ನೇ ತರಗತಿಯ ವಿದ್ಯಾರ್ಥಿಯ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಆರು ಜನರ ಮೇಲೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಾಚಾಪೂರದ ನಿವಾಸಿಯಾಗಿರುವ ಮಂಜುನಾಥ ಯಂಕಪ್ಪ ಲಮಾಣಿ ಎಂಬ ವಿದ್ಯಾರ್ಥಿಗೆ ಹೊಟ್ಟೆ, ಎದೆ ಮತ್ತು ಬೆನ್ನಿಗೆ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರು ಯುವಕರ ಮೇಲೆ ಪ್ರಕರಣ ದಾಖಲಾಗಿದೆ.

ಆಕಾಶ ಬಸಪ್ಪ ಕಟ್ಟಿಮನಿ, ಯಲ್ಲಪ್ಪ ಮಂಜುನಾಥ ಕಟ್ಟಿಮನಿ, ಸುರೇಶ ದುರ್ಗಪ್ಪ ಕಟ್ಟಿಮನಿ, ಬಸವರಾಜ ಅಣ್ಣಪ್ಪ ಕಟ್ಟಿಮನಿ, ಕಾರ್ತೀಕ ಬಸವರಾಜ ಕಟ್ಟಿಮನಿ ಹಾಗೂ ದರ್ಶನ ಹರಿಜನ ಮೇಲೆ ಪ್ರಕರಣ ದಾಖಲಾಗಿದೆ. ಎಲ್ಲ ಆರೋಪಿತರು ಕಲಘಟಗಿ ಠಾಣೆಯ ಡಾ.ಅಂಬೇಡ್ಕರನಗರದವರಾಗಿದ್ದಾರೆ.

ಎಲ್ಲರ ಮೇಲೆ ಕಲಘಟಗಿ ಠಾಣೆಯಲ್ಲಿ 341, 307, 504, 506 ಐಪಿಸಿ ಪ್ರಕರಣಗಳನ್ನ ಹಾಕಲಾಗಿದೆ. ಘಟನೆಯಲ್ಲಿ ದೇವೇಂದ್ರ ಲಕ್ಷ್ಮಣ ಲಮಾಣಿ ಎಂಬುವವರು ಗಾಯಗೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *