Karnataka Voice

Latest Kannada News

“ಮಂಡಕ್ಕಿ ಕೊಡದ ಮೊಂಡ ಹೆಂಡತಿ”- ಹುಬ್ಬಳ್ಳಿಯಲ್ಲಿ “ಗಂಡ”ನಿಗೆ ಚಾಕು ಇರಿತ…

ಹುಬ್ಬಳ್ಳಿ: ಬೀಗರ ಮನೆಯಲ್ಲಿ ತಿನ್ನಲು ಚುರುಮುರಿ ಕೇಳಿದ ಅಳಿಯನಿಗೆ ಬೀಗರ ಮನೆಯವರು ಮನಸೋ ಇಚ್ಛೆ ಥಳಿಸಿ ಚಾಕು ಇರಿದ ಪರಿಣಾಮ ಅಳಿಯನೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಬೆಂಗಳೂರು ಮೂಲದ ಗುರುಶಾಂತಪ್ಪ ಎಂಬಾತ ಇಂದಿರಾ ನಗರದಲ್ಲಿನ ತನ್ನ ಹೆಂಡತಿ ಮನೆಗೆ ಎರಡು ದಿನಗಳ ಹಿಂದೆ ಬಂದಿದ್ದ.ಇಂದು ಸಾಯಂಕಾಲ ಹೆಂಡತಿಗೆ ಚುರುಮುರಿ ಮಾಡಿಕೊಡು ಅಂತಾ ಕೇಳಿದ್ದಾನೆ ಆಗ ಹೆಂಡತಿ ಇಲ್ಲ ನನಗೆ ಮಾಡಿ ಕೊಡಲು ಆಗೋದಿಲ್ಲ ಅಂತಾ ಹೇಳಿದಾಗ ಇಬ್ಬರ ನಡುವೆ ಜಗಳ ಆರಂಭವಾಗಿದೆ.

ಆಗ ಕೋಪದಲ್ಲಿ ಗುರುಶಾಂತಪ್ಪ ಬೀಗರಗೆ ಬೈದಿದ್ದಾನೆ ಇದರಿಂದ ಕೋಪಗೊಂಡ ಗುರುಶಾಂತಪ್ಪನ ಅಳಿಯ ಅಜಯ ಹಾಗೂ ಆತನ ಮಾವ ಅಳಿಯನನ್ನು ಮನಸೋ ಇಚ್ಛೆ ಥಳಿಸಿ ಚಾಕುವಿನಿಂದ ಅಳಿಯನಿಗೆ ಚುಚ್ಚಿದ ಪರಿಣಾಮ ಅಳಿಯ ಕಿಮ್ಸ್ ಆಸ್ಪತ್ರೆ ಪಾಲಾಗಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿಯ ಕಸಬಾಪೇಟ ಠಾಣೆಯ ಪೊಲೀಸರು ಭೇಟಿ ನೀಡಿ ಬೀಗರ ಕೈಯಿಂದ ಬಡಿಸಿಕೊಂಡಿರುವ ಅಳಿಯನ ಬಳಿಯಿಂದ ಮಾಹಿತಿ ಪಡೆದಿದ್ದಾರೆ.

Leave a Reply

Your email address will not be published. Required fields are marked *