Posts Slider

Karnataka Voice

Latest Kannada News

ಗಣಿತ ಪರೀಕ್ಷೆಗೂ ವಿದ್ಯಾರ್ಥಿಗಳ ಗೈರು: ಆತಂಕದಲ್ಲಿ ಶಿಕ್ಷಣ ಇಲಾಖೆ

Spread the love

ಧಾರವಾಡ: ಹತ್ತನೇ ವರ್ಗ ಪರೀಕ್ಷೆ ನಿರಾಂತಕವಾಗಿ ನಡೆದಿದ್ದರೂ, ವಿದ್ಯಾರ್ಥಿಗಳ ಗೈರು ಮಾತ್ರ ಕಡಿಮೆಯಾಗುತ್ತಿಲ್ಲ. ಇದು ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಮೊದಲು ನಡೆದ ಕನ್ನಡ ವಿಷಯದಲ್ಲಿ 1ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದರು. ನಿನ್ನೆ ನಡೆದ ಗಣಿತ ವಿಷಯಕ್ಕೂ 373 ವಿದ್ಯಾರ್ಥಿಯನಿಯರು ಸೇರಿದಂತೆ 978 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕೊರೋನಾ ವೈರಸ್ ಆತಂಕದ ನಡುವೆಯೂ ನಡೆಯುತ್ತಿರುವ ಪರೀಕ್ಷೆಗೆ ಗೈರು ಆಗುತ್ತಿರುವುದು ಶಿಕ್ಷಣ ಇಲಾಖೆಯಲ್ಲಿ ಬೇಸರ ಮೂಡಿಸಿದೆ.

ಪರೀಕ್ಷಾ ಕೇಂದ್ರಗಳು ಸೇರಿದಂತೆ ಎಲ್ಲ ಕಡೆಯೂ ಸೂಕ್ತ ವ್ಯವಸ್ಥೆಯನ್ನ ಇಲಾಖೆ ಮಾಡಿಕೊಂಡಿದ್ದರೂ, ಪರೀಕ್ಷೆಗೆ ಹಾಜರಾಗದೇ ಇರುವುದು ಮತ್ತಷ್ಟು ಬೇಸರ ಮೂಡಿಸಿದೆ.


Spread the love

Leave a Reply

Your email address will not be published. Required fields are marked *