Posts Slider

Karnataka Voice

Latest Kannada News

ಸ್ನೇಕ ವಿಶ್ವನಾಥನಿಗೆ ಕಚ್ಚಿದ ಹಾವು- ಬುಸ್.. ಬುಸ್ ನ್ನೂ ಕಿಮ್ಸಗೆ ತಂದ- ಹೌಹಾರಿದ ನರ್ಸಗಳು

1 min read
Spread the love

ಹುಬ್ಬಳ್ಳಿ: ಬೇರೆಯವರ ಮನೆಯಲ್ಲಿ ಬರುತ್ತಿದ್ದ ಹಾವುಗಳನ್ನ ಹಿಡಿದು ಬೇರೆ ಪ್ರದೇಶಗಳಿಗೆ ಬಿಟ್ಟು ಬರುತ್ತಿದ್ದ ಸ್ನೇಕ ವಿಶ್ವನಾಥನಿಗೆ ಇಂದು ಹಾವೊಂದು ಕಚ್ಚಿದ್ದು, ಅದೇ ಹಾವನ್ನ ಡಬ್ಬಿಯಲ್ಲಿ ಹಾಕಿಕೊಂಡು ಕಿಮ್ಸಗೆ ಬಂದಿದ್ದು, ಕಿಮ್ಸನ ಬಹುಭಾಗ ಹೌಹಾರಿದ ಘಟನೆ ನಡೆದಿದೆ.

ಜಗದೀಶನಗರದ ವಿಶ್ವನಾಥ ಭಂಡಾರಿಗೆ ಹಾವು ಕಚ್ಚಿದ್ದು, ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾವು ವಾಸಿಸುವ ಪ್ರದೇಶದಲ್ಲಿ ಆಗಾಗ ಸರಿಸೃಪಗಳು ಬರುತ್ತಿದ್ದು, ಅವುಗಳನ್ನ ಹಿಡಿದು ಬೇರೆ ಕಡೆ ಬಿಟ್ಟು ಬರುತ್ತಿದ್ದರು. ಆದರೆ, ಇಂದು ಅದು ಸಾಧ್ಯವಾಗಿಲ್ಲ.

ನಾಗರಹಾವು ವಿಶ್ವನಾಥರಿಗೆ ಕಚ್ಚಿದ್ದು, ಮಿಠಾಯಿ ಡಬ್ಬಿಯಲ್ಲಿ ಹಾವನ್ನೂ ಕಿಮ್ಸಗೆ ತೆಗೆದುಕೊಂಡು ಬಂದಿದ್ದಾನೆ. ಡಬ್ಬಿಯಲ್ಲಿ ಹಾವು ನೋಡಿದ ನರ್ಸಗಳು ಗಾಬರಿಯಿಂದ ಚಿಕಿತ್ಸೆ ಕೊಡದೇ ಕೆಲಕಾಲ ದೂರವೇ ಉಳಿದಿದ್ದಾರೆ. ತದನಂತರ ವೈಧ್ಯರು ಡಬ್ಬಿಯನ್ನ ದೂರವಿಟ್ಟು, ಚಿಕಿತ್ಸೆ ನೀಡಿದ್ದಾರೆ.

ವಿಶ್ವನಾಥನ ನೂರಾರೂ ಹಾವುಗಳನ್ನ ಹಿಡಿದು ಬೇರೆ ಪ್ರದೇಶಗಳಿಗೆ ಬಿಟ್ಟು ಬಂದಿದ್ದಾರೆ. ಆದರೆ, ಇಂದು ಪಕ್ಕದ ಮನೆಯಲ್ಲಿ ನಾಗರ ಹಾವು ಬಂದಿದೆ ಎಂದಾಗ, ಯಥಾಪ್ರಕಾರ ಹಾವನ್ನ ಹಿಡಿಯಲು ಹೋಗಿದ್ದಾರೆ. ಆದರೆ, ಹಾವು ಕಚ್ಚಿದೆ.


Spread the love

Leave a Reply

Your email address will not be published. Required fields are marked *