ಶಿವಳ್ಳಿಯಲ್ಲಿ “ಕೆವಿಜಿಬಿ”ಗೆ ಕನ್ನ: ಸರಳು ಮುರಿದು ಒಳನುಗ್ಗಿರೋ ಕಳ್ಳರು…!

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿರೋ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಕಿಡಕಿಯ ಸರಳು ಮುರಿದು ಒಳ ನುಗ್ಗಿರೋ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಬ್ಯಾಂಕಿನ ಹಿಂಭಾಗದ ಕಿಡಕಿಯ ಮೂರು ಸರಳುಗಳನ್ನ ಕಟರ್ ನಿಂದ ಕಟ್ ಮಾಡಿರೋ ಕಳ್ಳರು, ಕಿಡಕಿಯ ಮೂಲಕ ಒಳ ನುಗ್ಗಿದ್ದಾರೆ. ಘಟನೆಯ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು, ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದಾರೆ.