ದಿನಸಿ ಕಿಟ್ ಪಡೆಯುವ ಸಮಾಜದ ಬಾಂಧವರು ಬಡವರಲ್ಲ: ರೇಖಾ ಕೋಪಡೆ೯.

ಧಾರವಾಡ: ದಿನಸಿ ಕಿಟ್ ಪಡೆಯುವ ಸಮಾಜದ ಬಾಂಧವರು ಬಡವರಲ್ಲ ಎಂದು ಬಾಳೆಕಾಯಿ ಓಣಿಯ ಶ್ರೀ ನಾಮದೇವ ಹರಿಮಂದಿರದಲ್ಲಿ ನಾಮದೇವ ಸಿಂಪಿ ಸಮಾಜದ ಗೌರವ ಅಧ್ಯಕ್ಷ ನಾರಾಯಣ ವಿರೂಪಾಕ್ಷಪ್ಪ ಕೋಪಡೆ೯ ಅವರ ಪತ್ನಿ ರೇಖಾ ಕೋಪಡೆ೯ ಹೇಳಿದರು.

ಅವರು ಸಮಾಜ ಬಾಂಧವರಿಗೆ ದಿನಸಿ ಕಿಟ್ ವಿತರಿಸುವ ಕಾಯ೯ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸಕಾ೯ರದ ಆದೇಶ ಪಾಲನೆಗಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿದ ಹಿನ್ನೆಲೆ ಪ್ರತಿ ದಿನ ಅರಿವೆ ಹೂಲೆದು ದುಡಿದೆ ತಿನ್ನುವ ನಮ್ಮ ಜನಾಂಗ ಆಥಿ೯ಕ ಮುಗ್ಗಟ್ಟು ಅನುಭವಿಸುತ್ತಿರುವದನ್ನ ಮನಗಂಡು ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವರು ಸಮಾಜ ಬಾಂಧವರಿಗೆ ಅಳಿಲು ಸೇವೆ ಮಾಡಲು ಮುಂದಾಗಿದ್ದು ಶ್ಲಾಘನೀಯ ಎಂದರು.
ಒಟ್ಟು 40 ಕಿಟ್, ಸಾವಿರ ಬೆಲೆಯದ್ದಿದೆ. ಅಕ್ಕಿ, ಗೋದಿ , ತೊಗರಿಬೇಳೆ,ಜೋಳ, ಎಣ್ಣಿ, ಬೆಲ್ಲ, ಸಕ್ಕರೆ, ರವಾ, ಅವಲಕ್ಕಿ, ಜೀರಿಗೆ ,ಸಾಸಿವೆ, ಚಹಾಪುಡಿ, ಹೆಸರು, ಮಡಕಿ, ಸೋಪ, ಪೇಸ್ಟ ಕಿಟ್ ನಲ್ಲಿದೆ. ಗೌರವ ಅಧ್ಯಕ್ಷ ನಾರಾಯಣರಾವ್ ಕೋಪಡೆ೯, ನಿತಿನ್ ರಾ ಪತಂಗೆ, ಹತ್ತು ಕಿಟ್. ಮಧುಸೂದನ್ ಪಿಸೆ, ಸುಮಾ ಮು ಹಾಸಲಕರ ತಲಾ ಐದು ಕಿಟ್, ಬಾಲರಾಜ ಲಾಳಗೆ ನಾಲ್ಕು ಕಿಟ್, ಮಹಾದೇವ G ಬಾರಾಟಕ್ಕೆ, ಆನಂದ ನಾ ರೇಣಕೆ, ಉಮೇಶ ವಾಸುದೇವ ಸದರೆ, ಪರಶುರಾಮ ಜ ಹಾಸಲಕರ, ಅಶೋಕ ಬೋಂಗಾಳೆ, ಸೋಮನಾಥ S ಗಂಜಿಗಟ್ಟಿ, ಸಂಜೀವ ಮಹೇಂದ್ರಕರ, ರಾಘವೇಂದ್ರ ಚಿಕ್ಕಲಕರ, ಕೃಷ್ಣಾ ಚಿಕ್ಕೂಡೆ೯ ತಲಾ ಎರಡು ಕಿಟ್, ಗುಂಡು ಭಿಂಗೆ, ಜಯಶ್ರೀ ಕ್ಷೀರಸಾಗರ ತಲಾ ಒಂದು ಕಿಟ್ ನೀಡಿದ್ದಾರೆ.
ಸಮಾಜದ ಅಧ್ಯಕ್ಷ ಮುರಳಿಧರ ಹಾಸಲಕರ, ಉಪಾಧ್ಯಕ್ಷ ಧೂಂಡಿಬಾ ಕ್ಷೀರಸಾಗರ, ಪಂಚರಾದ ರಮೇಶ ಘಾನವಟಕರ, ಶಂಕರ ವಂಡಕರ, ಅಶೋಕ ಭೂಂಗಾಳೆ, ಪ್ರಕಾಶ ಸದರೆ , ಡಾ ಸುಮಾ ಹಾಸಲಕರ ಮುಂತಾದವರು ಉಪಸ್ಥಿತರಿದ್ದರು.