Posts Slider

Karnataka Voice

Latest Kannada News

ಮೂರು ಸಲ ಮುಳುಗಿದರೂ- ಸರಕಾರಿ ಶಾಲೆ ಸ್ಥಳಾಂತರವಿಲ್ಲ: ಸಚಿವರೇ ನೀವಿದನ್ನೂ ಗಮನಿಸಲೇಬೇಕು..!

1 min read
Spread the love

ಕಲಬುರಗಿ: ಶಿಕ್ಷಣ ಸಚಿವ ಸುರೇಶಕುಮಾರ ನೀವೂ ಅಧಿಕಾರ ವಹಿಸಿಕೊಂಡ ನಂತರ ಶಿಕ್ಷಣ ಇಲಾಖೆಯಲ್ಲಿನ ನೂರೆಂಟು ಸಮಸ್ಯೆಗಳು ಗೊತ್ತಾಗಿರಬಹುದು. ಆದರೆ, ನಾವೂ ನಿಮಗೆ ತಿಳಿಸಲು ಮತ್ತೂ ತೋರಿಸಲು ಹೊರಟಿರುವುದನ್ನ ನೀವೂ ನೋಡಿರಲಿಕ್ಕೆ ಸಾಧ್ಯವೇಯಿಲ್ಲ. ನಿಮ್ಮ ಇಲಾಖೆಯ ಅಧಿಕಾರಿಗಳು, ಸರಕಾರದ ಕೆಲಸ ದೇವರ ಕೆಲಸವೆಂದು ಏನೇನು ಮಾಡುತ್ತಿದ್ದಾರೆ ನೀವೇ ನೋಡಿ..

ದೃಶ್ಯಾವಳಿಗಳ ವರದಿ

ಇದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಸಮಖೇಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ನೋಡಿದರೇ ಎಂತವರಿಗೂ ಬೇಸರ ಮೂಡಿಸತ್ತೆ. ಪಾಲಕರು ತಮ್ಮ ಮಕ್ಕಳನ್ನ ಶಾಲೆಗೆ ಕಳಿಸುವ ಮುನ್ನವೇ ಆತಂಕದಲ್ಲಿ ಮುಳುಗಿದ್ದಾರೆ.

ಈ ಶಾಲೆ ಮೂರು ಸಂಪೂರ್ಣವಾಗಿ ಮಳೆ ಪ್ರವಾಹದಿಂದ ಮುಳುಗಿದೆ. ಈ ಬಗ್ಗೆ ಇಲ್ಲಿನ ಶಿಕ್ಷಕ ಬಸವರಾಜ ಹೊನ್ನಳ್ಳಿ, ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ವಿಷಯವನ್ನ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅವರಿಗೆ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಪೃವತ್ತರಾದ ಸಜ್ಜನ, ಡಿಡಿಪಿಐ, ಬಿಇಓಗಳಿಗೆ ಮಾತನಾಡಿದ್ದಾರೆ. ಅಧಿಕಾರಿಗಳು ಕೂಡಾ ಶಾಲೆಯ ಪರಿಶೀಲನೆ ನಡೆಸಿದ್ದಾರೆ.

ಆದರೆ, ಇದು ಪರಿಶೀಲನೆಗೆ ಸಿಮೀತವಾಗದೇ, ಶಾಲೆ ಸ್ಥಳಾಂತರ ಮಾಡಲು ಸರಕಾರ ಮುಂದಾಗಬೇಕಿದೆ. ಈ ಶಾಲೆಯ ಪ್ರತಿದಿನದ ಫಾಲೋಅಪ್ ನ್ನ ನಾವೂ ಮಾಡುತ್ತೇವೆ.. ಶಾಲೆ ಸ್ಥಳಾಂತರವಾಗಲೇಬೇಕು ಎನ್ನುವುದು ಸ್ಥಳೀಯರ ಕೂಗಾಗಿದ್ದು, ಅದಕ್ಕೆ ನಮ್ಮ ಬೆಂಬಲವೂ ಇರತ್ತೆ.


Spread the love

Leave a Reply

Your email address will not be published. Required fields are marked *