BSY ಓಟಿಗಾಗಿ ಪಂಚಮಸಾಲಿ ಸಮಾಜ ಬಳಕೆ: ಸದಾನಂದ ಡಂಗನವರ..!

ಹುಬ್ಬಳ್ಳಿ: ತಾಲೂಕ ಪಂಚಮಸಾಲಿ ಸಮಾಜದ ವತಿಯಿಂದ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಇಂದು ಹುಬ್ಬಳ್ಳಿಯ ತಹಸೀಲ್ದಾರ್ ಕಚೇರಿಗೆ ಸಮಾಜದ ಮುಖಂಡರು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಸದಾನಂದ.ವಿ.ಡಂಗನವರ ರವರ ನೇತೃತ್ವದಲ್ಲಿ ತಹಶೀಲ್ದಾರ ಅವರಿಗೆ ಮನವಿ ಅರ್ಪಿಸಲಾಯಿತು.
ಈ ಸಮಯದಲ್ಲಿ ಮಾತನಾಡಿದ ಸದಾನಂದ ಡಂಗನವರ, ಪಂಚಾಮಸಾಲಿ ಸಮಾಜ ಶೋಷಣೆಗೆ ಒಳಗಾಗಿದೆ. ರೈತಾಪಿ ಕುಟುಂಬದಿಂದ ಬಂದಿರುವ ಸಮಾಜಕ್ಕೆ ನ್ಯಾಯ ಸಿಗಬೇಕಿದೆ ಎಂದರು.
ಸಿಎಂ ಯಡಿಯೂರಪ್ಪನವರು ಈ ಸಮಾಜವನ್ನ ಕೇವಲ ಮತಕ್ಕಾಗಿ ಪಂಚಮಸಾಲಿ ಸಮಾಜವನ್ನ ಬಳಕೆ ಮಾಡಿಕೊಳ್ಳಬಾರದು. ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಡಂಗನವರ ಹೇಳಿದರು.
ಸಮಾಜದ ಮುಖಂಡರಾದ. ಈಶ್ವರ್ ಶಿರಸಂಗಿ ಗಂಗಾಧರ್ ದೊಡವಾಡ, ಶಂಕರಲಿಂಗ ಮಲಕಣ್ಣವರ, ಪವನ್ ಹಳ್ಯಾಳ . ಚಿದಾನಂದ ಶಿಶ್ವಿನಹಳ್ಳಿ ಕುಮಾರ ಕುಂದನಹಳ್ಳಿ ಚಂದ್ರು ಉಣಕಲ್ ಎಲ್ಲಪ್ಪ ಹಳ್ಯಾಳ ಶಿವಾನಂದ ಮಾಯಕಾರ ಮುಂತಾದವರು ಉಪಸ್ಥಿತರಿದ್ದರು