Karnataka Voice

Latest Kannada News

ರಂಗಾಯಣ ಆಡಳಿತಾಧಿಕಾರಿಯಾಗಿ ಮಂಜುನಾಥ ಡೊಳ್ಳಿನ


Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
Spread the love

ಧಾರವಾಡ: ಇಲ್ಲಿನ ರಂಗಾಯಣದ ಆಡಳಿತಾಧಿಕಾರಿಯಾಗಿ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ ಹೆಚ್ಚುವರಿ ಪ್ರಭಾರ ವಹಿಸಿಕೊಂಡರು.

ಇದುವರೆಗೆ ಈ ಹುದ್ದೆಯ ಪ್ರಭಾರ ಹೊಂದಿದ್ದ ಉಪವಿಭಾಗಾಧಿಕಾರಿ, ಐಎಎಸ್ ಅಧಿಕಾರಿ ಡಾ.ಬಿ.ಗೋಪಾಲಕೃಷ್ಣ ಅಧಿಕಾರ ಹಸ್ತಾಂತರಿಸಿದರು.

ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ ಮಾತನಾಡಿ, ರಂಗಾಯಣವು ಅನನ್ಯ ಸಾಂಸ್ಕೃತಿಕ ಘಟಕವಾಗಿದ್ದು ,ಇಲ್ಲಿನ ಸೇವಾ ಅವಧಿಯು ತೃಪ್ತಿ ಮತ್ತು ಸಂತಸ ನೀಡಿದೆ. ಕಂದಾಯ ಇಲಾಖೆಯ ಅಧಿಕ ಕಾರ್ಯಭಾರದಿಂದಾಗಿ ರಂಗಾಯಣದ ಆಡಳಿತಾಧಿಕಾರಿ  ಜವಾಬ್ದಾರಿಯನ್ನು ಹಸ್ತಾಂತರಿಸುತ್ತಿದ್ದೇನೆ, ಸೇವಾವಧಿಯಲ್ಲಿ  ನಿರ್ದೇಶಕರು,ಸಿಬ್ಬಂದಿ, ರಂಗಾಸಕ್ತರು ಉತ್ತಮ ಸಹಕಾರ ನೀಡಿದ್ದಾರೆ ಎಂದರು.

ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed