Posts Slider

Karnataka Voice

Latest Kannada News

ರಾಣೆಬೆನ್ನೂರ: ನಾಗಾರಾಜ ಕುಡಪಲ್ಲಿ ರಾಹುಲ ಬ್ರಿಗೇಡ್ ರಾಜ್ಯಾಧ್ಯಕ್ಷ

1 min read
Spread the love

ರಾಣೆಬೆನ್ನೂರ: ಕಾಂಗ್ರೆಸ್ ಪಕ್ಷ ಇತಿಹಾಸ ಹೊಂದಿರುವ ಪಕ್ಷವಾಗಿದ್ದು, ಅಂದಿನ ಅಭಿವೃದ್ದಿಗಳನ್ನು ಇಂದು ಮುಂದುವರೆಸುತ್ತಿದ್ದಾರೆ ಎಂದು ರಾಹುಲ್ ಬ್ರಿಗೇಡ್ ರಾಜ್ಯಾಧ್ಯಕ್ಷ  ಅಶೋಕ ಚಕ್ರವರ್ತಿ ಹೇಳಿದರು.

ರಾಣೆಬೆನ್ನೂರ ನಗರದಲ್ಲಿ ಏರ್ಪಡಿಸಿದ್ದ ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಗೌರವ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ‌ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಲ್ಲಿ ಜನಸೇವೆ ಮಾಡಿಕೊಂಡು ಬಂದಂತಹ ಪಕ್ಷವಾಗಿದೆ. ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷ ನೀಡಿದ  ಅಭಿವೃದ್ಧಿಗಳನ್ನು ಇಂದಿನ ಬಿಜೆಪಿ ಸರ್ಕಾರ ಮುಂದುವರೆಸಿದೆ ಎಂದರು.  ರಾಹುಲ್ ಗಾಂಧಿ  ಯುವಕರಿಗೆ ಪಕ್ಷದಲ್ಲಿ ಮುಂಚೂಣಿ ನೀಡುವ ಸಲುವಾಗಿ ಬ್ರಿಗೇಡ್ ಮಾಡಲಾಗಿದೆ. ಅವರ ಮಾರ್ಗದರ್ಶನ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಭವ್ಯ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ನಾವು‌ ಮುಂದಾಗುತ್ತವೆ ಎಂದರು.

ಇಂದು ರಾಹುಲ್ ಗಾಂಧಿ ಬ್ರೀಗೇಡ್ ಗೌರವ ರಾಜ್ಯಾಧ್ಯಕ್ಷ ನಾಗರಾಜ ಕುಡಲಪಲಿ ಅಧಿಕಾರ ವಹಿಸಿಕೊಂಡರು. ಇದೇ ಸಮಯದಲ್ಲಿ ನಾಗರಾಜ ಕುಡಪಲ್ಲಿ ಅವರನ್ನ ಸತ್ಕರಿಸಲಾಯಿತು.

ಉಪಾಧ್ಯಕ್ಷೆ ಮಹಾಲಕ್ಷ್ಮಿ, ಮಹೇಶ ಚಕ್ರವರ್ತಿ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ನಗರಸಭಾ ಸದಸ್ಯರಾದ ಪುಟ್ಟಪ್ಪ ‌ಮರಿಯಮ್ಮನವರ, ನಿಂಗರಾಜ ಕೋಡಿಹಳ್ಳಿ, ಚೈತ್ರಾ ಮಾಗನೂರ, ಶೇರುಖಾನ‌ ಕಾಬೂಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *