ಗ್ರಾಮದಲ್ಲೇ ಹರಿಯುತ್ತಿರುವ ಹಳ್ಳಗಳು- ಬದುಕಿಗಾಗಿ ಜನರ ಪರದಾಟ
1 min readವಿಜಯಪುರ: ನಿರಂತರವಾಗಿ ಧಾರಕಾರ ಸುರಿಯುತ್ತಿರುವ ಮಳೆ, ಜನರ ಜೀವನವನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ಬದುಕುವ ಕನಸಿಗೆ ಕೊಳ್ಳಿಯಿಡುವ ಹಾಗೇ ಮಳೆ ಸುರಿಯುತ್ತಿರುವುದು ಜನರ ಜೀವನಕ್ಕೆ ಮಾರಕವಾಗುತ್ತಿದೆ.
ಬಾರೀ ಮಳೆಯ ಹಿನ್ನೆಲೆಯಲ್ಲಿ ಗ್ರಾಮಗಳೇ ಹಳ್ಳಗಳಾಗಿ ಮಾರ್ಪಟ್ಟ ಘಟನೆ ಬಸವನ ಬಾಗೇವಾಡಿ ತಾಲೂಕಿನ ಅರಳಿಚಂಡಿ ಗ್ರಾಮದಲ್ಲಿ ನಡೆಯುತ್ತಿದೆ. ಇಡೀ ಗ್ರಾಮದ ಪ್ರಮುಖ ರಸ್ತೆಯಲ್ಲಿ ರಭಸವಾಗಿ ನೀರು ಹರಿಯುತ್ತಿದ್ದು, ಜನ ಎಲ್ಲವಕ್ಕೂ ಪರದಾಡುವಂತಾಗಿದೆ.
ಮಂದಿರ ಬಳಿಯಿರುವ ಟ್ರ್ಯಾಕ್ಟರ್ ಟೇಲರ್ ನಲ್ಲಿ ಕುಳಿತಿರುವ ಮೂವರಿಗೆ ಈ ಬದಿಯ ತಮ್ಮ ಮನೆಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮವೇ ಇಬ್ಬಾಗವಾದ ಹಾಗೇ ಭಾಸವಾಗುತ್ತಿದ್ದು, ಒಂದು ಭಾಗದಲ್ಲಿದ್ದವರು ಮತ್ತೊಂದು ಭಾಗಕ್ಕೆ ಬರದ ಹಾಗಿದೆ.
ಇಂದು ಕೂಡಾ ಮಳೆ ಹೆಚ್ಚುವ ಸಂಭವವಿದ್ದು, ಗ್ರಾಮೀಣ ಪ್ರದೇಶಗಳ ಬದುಕನ್ನ ಮತ್ತೂ ಜೀವನಕ್ಕೆ ಬೇಕಾದ ಬೆಳೆಯನ್ನೂ ನಾಶ ಮಾಡುತ್ತಿದೆ ಈ ರಣಭೀಕರ ಮಳೆ.