53ರ ಪ್ರದೀಪ ಶೆಟ್ಟರಗೆ ಶುಭಾಶಯ ಕೋರಿದ್ದು ಯಾಕೆ ಗೊತ್ತಾ..!
1 min readಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಅವರಿಗಿಂದು ಜನ್ಮದಿನದ ಸಂಭ್ರಮ. 53ಕ್ಕೆ ಅಡಿಯಿಟ್ಟಿರುವ ಅವರಿಗಿಂದು ಹಲವರು ಶುಭಾಶಯ ಕೋರಿದರು.
ಪ್ರದೀಪ ಶೆಟ್ಟರ ಅವರಿಗೆ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಸಾಬೂನ ಮಾರ್ಜಕ ಆಡಳಿತ ಮಂಡಳಿ ನಿರ್ದೇಶಕ ಮಲ್ಲಿಕಾರ್ಜುನ ಸಾವುಕಾರ, ಜಿಲ್ಲಾ ಕೈಗಾರಿಕಾ ಪ್ರಕೋಷ್ಠದ ಸಂಚಾಲಕ ನರೇಂದ್ರ ಕುಲಕರ್ಣಿ, ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ ಸೇರಿದಂತೆ ಹಲವರು ಪುಷ್ಟಗುಚ್ಚ ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿದರು.
ಇದೇ ಸಮಯದಲ್ಲಿ ಪ್ರದೀಪ ಶೆಟ್ಟರರಿಗೆ ಶುಭಾಶಯ ತಿಳಿಸಿದ ಸಂತೋಷ ಚವ್ಹಾಣ, ಜನರ ಬಗ್ಗೆ ಇರುವ ನಿಮ್ಮ ಕಾಳಜಿ ಹೀಗೆ ಮುಂದುವರೆಯಲ್ಲಿ. ನಿಮ್ಮ ಆರೋಗ್ಯವನ್ನ ದೇವರು ಮತ್ತಷ್ಟು ಚೆನ್ನಾಗಿಡಲಿ ಎಂದರು.
ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ನಾಯಕರ ಶುಭಾಶಯ ಪಡೆದು ಎಲ್ಲರಿಗೂ ಅಭಿನಂದನೆಯನ್ನ ತಿಳಿಸಿದರು.