Posts Slider

Karnataka Voice

Latest Kannada News

ಬಸವನಾಡಿನಲ್ಲಿ ಮೇಲ್ಜಾತಿಯವರಿಂದ ಯುವಕನ ಹತ್ಯೆ: ಎತ್ತ ಸಾಗುತ್ತಿದೆ ನಾಡು

1 min read
Spread the love

ವಿಜಯಪುರ: ಮೇಲ್ಜಾತಿ, ಕೀಳಜಾತಿ ಪಿಡುಗು ಇನ್ನು ಆಧುನಿಕ ಯುಗದಲ್ಲೂ ಜೀವಂತೆ ಇದೇ ಎನ್ನುವುದಕ್ಕೆ ತಾಜಾ ಉದಾಹರಣೆಯೊಂದು ಸಿಂದಗಿ ಮರ್ಡರ್ ಕೇಸ್ ನಲ್ಲಿ ಬೆಳಕಿಗೆ ಬಂದಿದೆ.

ದೇವಸ್ಥಾನದ ಕಟ್ಟೆಯ ಮೇಲೆ ತಮಗೆ ಸಮಾನವಾಗಿ ಕುಳಿತ್ತಿದ್ದಕ್ಕೆ ಮೇಲ್ಜಾತಿಯವರು ಬೂದಿಯಾಳ ಗ್ರಾಮದ ಅನಿಲ್ ಇಂಗಳಗಿಯನ್ನು ಹತ್ಯೆ ಮಾಡಿದ್ದಾರೆ ಎಂದು ಮೃತನ ಪೋಷಕರು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಸಿಂದಗಿಪಟ್ಟಣದ ಬೂದಿಹಾಳ ಗ್ರಾಮದಲ್ಲಿ ಅನಿಲ್ ಇಂಗಳಗಿಯನ್ನು ಇಬ್ಬರು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ರು. ಆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಬೂದಿಹಾಳ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆಯ ಮೇಲೆ ಅನಿಲ್ ಇಂಗಳಗಿ ಕುಳಿತ್ತಿದ್ದಕ್ಕೆ ಸಿದ್ದು ಬಿರಾದಾರ ಜಗಳ ಮಾಡಿದ್ದ. ಅದೇ ಕಾರಣಕ್ಕೆ ಸಿದ್ದು ಬಿರಾದಾರ ಹಾಗೂ ಸಂತೋಷ ಹಿರ್ಲಾಕುಂಡ ಸೇರಿಕೊಂಡು ಅನಿಲ್ ಕಣ್ಣಿಗೆ ಖಾರದ ಪುಡಿ ಎರಚಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಮೃತನ ತಂದೆ ಶರಣಪ್ಪ ಇಂಗಳಗಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಗ್ರಾಮಸ್ಥರಿಂದಲೂ ಮಾಹಿತಿಯನ್ನ ಸಂಗ್ರಹಿಸಿದ್ದಾರೆ.

ಈಗಾಗಲೇ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಮುಂದಿನ ತನಿಖೆಯನ್ನ ಕೈಗೊಂಡಿದ್ದಾರೆ. ಆದರೆ, ಮನುಕುಲ ಇನ್ನೂ ಇಂತಹದ ಸ್ಥಿತಿಯಲ್ಲಿರೋದು ಮಾತ್ರ ನಾಚಿಗೇಡಿತನದ ಸಂಗತಿಯಾಗಿದೆ.


Spread the love

Leave a Reply

Your email address will not be published. Required fields are marked *