Posts Slider

Karnataka Voice

Latest Kannada News

ಅಂದರ್-ಬಾಹರನಲ್ಲಿ ಲಕ್ಷಾಂತರ ರೂಪಾಯಿ ಗೆದ್ದ: ಹಣ ಮನೆಗೆ ಒಯ್ಯುವ ಮುನ್ನವೇ ಹತ್ಯೆಯಾದ..!

1 min read
Spread the love

ವಿಜಯಪುರ: ದೀಪಾವಳಿ ಪ್ರಯುಕ್ತ ಪಟ್ಟಣದ ಹೊರವಲಯದಲ್ಲಿ ಆಯೋಜಿಸಿದ್ದ ಅಂದರ್ ಬಾಹರ್ ಆಟದಲ್ಲಿ ಲಕ್ಷಾಂತರ ರೂಪಾಯಿ ಹಣ ಗೆದ್ದವನ ಜೀವ ತೆಗೆದಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.

ಕಲ್ಲಿನಿಂದ ಹೊಡೆದು ತಿಪ್ಪಣ್ಣ ಗೊಂದಳಿ (36) ಎಂಬಾತನನ್ನ ಹತ್ಯೆಗೈಯಲಾಗಿದೆ.  ಕಳೆದ ರಾತ್ರಿ ಅಂದರ್ ಬಾಹರ್ ಇಸ್ಪಿಟ್ ಆಟದಲ್ಲಿ ಲಕ್ಷಾಂತರ ಹಣವನ್ನ ಗೆದ್ದಿದ್ದ. ಇದನ್ನು ಸಹಿಸಲಾಗದ ದುಷ್ಕರ್ಮಿಗಳು ಕೊಲೆಗೈದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ದೀಪಾವಳಿ ಸಮಯದಲ್ಲಿ ನಿರಂತರವಾಗಿ ಯಾರದೇ ಭಯವಿಲ್ಲದೇ ಇಸ್ಪೀಟ್ ಅಡ್ಡೆಗಳು ಆರಂಭವಾಗಿದ್ದು, ಕೆಲವೆಡೆ ಪೊಲೀಸರೇ ಅನಧಿಕೃತವಾಗಿ ಪರವಾನಿಗೆ ನೀಡಿದ್ದಾರೆನ್ನಲಾಗಿದ್ದು, ಅಂತಹ ಅಡ್ಡೆಯೊಂದರಲ್ಲೇ ತಿಪ್ಪಣ್ಣ ಕೂಡಾ ಹಣವನ್ನ ಗೆದ್ದಿದ್ದ.

ಆತನೊಂದಿಗೆ ಆಡುತ್ತಿದ್ದವರು ಇನ್ನೂ ಆಡಬೇಕೆಂದು ಹಠ ಹಿಡಿದಾಗ, ಹೆಚ್ಚು ಹಣ ಬಂದಿದ್ದರಿಂದ ಅಲ್ಲಿಂದ ತಿಪ್ಪಣ್ಣ ಹೊರಟು ನಿಂತಿದ್ದಾನೆ. ಹೀಗಾಗಿಯೇ ಆತನ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆವ್ಯಕ್ತಪಡಿಸಿದ್ದಾರೆ. ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *