Karnataka Voice

Latest Kannada News

“ಅಸುರ ಅರ್ಬಾಜ್”: ಪ್ರೂಟ್ ಇರ್ಪಾನ್ ಮಗನಿಂದ ಮೊಹ್ಮದ ಕುಡಚಿ, ಗಣೇಶ ಹತ್ಯೆ…!?

ಧಾರವಾಡ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕಮಲಾಪೂರದಲ್ಲಿ ಇಬ್ಬರ ಮೇಲೆ ಗುಂಡು, ತಲ್ವಾರನಿಂದ ದಾಳಿ ಮಾಡಿರುವ ಗುಂಪೊಂದು ಹತ್ಯೆ ಮಾಡಿ ಪರಾರಿಯಾಗಿದೆ.

ಹತ್ಯೆಯಾದವರನ್ನ ಮೊಹ್ಮದ ಕುಡಚಿ ಮತ್ತು ಆತನ ಸಹಚರ ಗಣೇಶ ಎಂದು ಗುರುತಿಸಲಾಗಿದ್ದು, ಕೊಲೆಯನ್ನ ಪ್ರೂಟ್ ಇರ್ಫಾನ್ ಮಗ ಅರ್ಬಾಜ್ ತಂಡ ಮಾಡಿದೆ ಎಂದು ಹೇಳಲಾಗಿದೆ.

 

ಪ್ರೂಟ್ ಇರ್ಫಾನ್ ಹುಬ್ಬಳ್ಳಿಯಲ್ಲಿ ಹಾಡುಹಗಲು ಹತ್ಯೆಯಾಗುವ ಮುನ್ನ ಮೊಹ್ಮದ ಕುಡಚಿ ಆತನೊಂದಿಗೆ ಇರುತ್ತಿದ್ದ. ಇರ್ಫಾನ್‌ನ ಹಲವು ಆಸ್ತಿಗಳು ಕುಡಚಿಯ ಹೆಸರಿನಲ್ಲಿದ್ದವು. ಇರ್ಫಾನ್ ಹತ್ಯೆಯ ನಂತರ ಈ ವಿಷಯವಾಗಿ ಮಾತುಕತೆ, ಜಗಳಗಳು ನಡೆದಿದ್ದವು ಎಂದು ಹೇಳಲಾಗಿದೆ.

ಹಲವು ದಿನಗಳ ಹಿಂದೆ ಕುಡಚಿಯ ಜೊತೆ ಹಣಕಾಸಿನ ಒಪ್ಪಂದ ಆಗಿತ್ತಾದರೂ ಅದನ್ನ ಕೊಡಲು ಮತ್ತೆ ಮೀನಮೇಷ ಎಣಿಸಿದ್ದರಿಂದ ಅರ್ಬಾಜ್ ಇಂತಹ ಕೃತ್ಯ ಎಸಗಿರಬಹುದೆಂದು ಹೇಳಲಾಗಿದೆ.

ಪ್ರಕರಣದಲ್ಲಿ ಗುಂಡಿನ ದಾಳಿಯ ಜೊತೆಗೆ ತಲ್ವಾರ ಕೂಡಾ ಬಳಕೆಯಾಗಿದೆ ಎನ್ನಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *