Posts Slider

Karnataka Voice

Latest Kannada News

ಮುಕ್ಕಲ್‌ದಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಪಂಚಾಯತಿಯಲ್ಲೇ ಹೋಮ ಹವನ…!

1 min read
Spread the love

ಕಲಘಟಗಿ: ನೂತನವಾಗಿ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಸದಸ್ಯರೆಲ್ಲರೂ ಕೂಡಿಕೊಂಡು ಗ್ರಾಮದ ಅಭಿವೃದ್ಧಿಯಾಗಲಿ ಎಂದು ವಿಶೇಷ ಹೋಮ-ಹವನ ಮಾಡಿಸಿ, ಸಾರ್ವಜನಿಕರ ಪ್ರೀತಿಗೆ ಪಾತ್ರವಾದ ಘಟನೆ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗರೆಡ್ಡಿ ನಡುವಿನಮನಿ, ಉಪಾಧ್ಯಕ್ಷ ಶ್ರೀಕಾಂತ ಪಾಟೀಲ, ಪಿಡಿಓ ಜಗದೀಶ ಹಾಗೂ ಸದಸ್ಯರು ಮತ್ತು ಗ್ರಾಮದ ಪ್ರಮುಖರು ಸೇರಿಕೊಂಡು ಹೋಮ ಹವನವನ್ನ ನಡೆಸಿ, ಶಾಂತಿ ನೆಮ್ಮದಿಗಾಗಿ ಪ್ರಾರ್ಥಿಸಿದರು.


ಕಳೆದ ಚುನಾವಣೆಯಲ್ಲಿ ಕೈ ಬೆಂಬಲಿತ ಹತ್ತು ಸದಸ್ಯರು ಗೆಲುವು ಸಾಧಿಸಿ ಅವಿರೋಧವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಕ್ಕಲ ಗ್ರಾಮ ಪಂಚಾಯತಿ ಇತಿಹಾಸದಲ್ಲಿ ಇದು ಮೊದಲು ಬಾರಿಯಾಗಿದೆ. ಬಿಜೆಪಿ ಬೆಂಬಲಿತ ಸದಸ್ಯರು, ಹೀನಾಯವಾಗಿ ಸೋತಿರುವುದನ್ನ ಇಲ್ಲಿ ಸ್ಮರಿಸಬಹುದಾಗಿದೆ.
ಆದರೆ, ಚುನಾವಣೆ ಮುಗಿದ ಮೇಲೆ ಗ್ರಾಮದ ಏಳಿಗೆ ಮುಖ್ಯವೆಂಬ ಕಾರಣದಿಂದ ಎಲ್ಲರೂ ಕೂಡಿಕೊಂಡು ಹೋಮ ಹವನ ಮಾಡಿಸಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.


Spread the love

Leave a Reply

Your email address will not be published. Required fields are marked *