ನವಲಗುಂದ “ಆ ವೀಡೀಯೊ” ಅಸಲಿಯತ್ತೇನು…!? ಕ್ಷೇತ್ರದ ಪ್ರತಿ ಮತದಾರನೂ ನೋಡಲೇಬೇಕಾದ ಸ್ಟೋರಿಯಿದು…!!!!

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಸಮ್ಮುಖದಲ್ಲಿ ನವಲಗುಂದ ಶಾಸಕರು ಮತದಾರನ ಜೊತೆ ನಡೆದುಕೊಂಡಿದ್ದ ಘಟನೆಯ ವೀಡಿಯೋ ವೈರಲ್ ಆಗಿದ್ದು, ಅದರ ಅಸಲಿ ಕಹಾನಿಯನ್ನ ಕರ್ನಾಟಕವಾಯ್ಸ್.ಕಾಂ ಬಿಚ್ಚಿಡುತ್ತಿದೆ.
ಹೌದು… ಬಂಡಿವಾಡದ ವ್ಯಕ್ತಿಯೋರ್ವ ತಮ್ಮ ಸಮಸ್ಯೆ ಬಗೆಹರಿಸುವಂತೆ ಸಚಿವರನ್ನ ಕೇಳಿಕೊಳ್ಳುತ್ತಿದ್ದ ಸಮಯದಲ್ಲಿ ನವಲಗುಂದ ಕ್ಷೇತ್ರದ ಶಾಸಕರು ರೊಚ್ಚಿಗೆದ್ದಿದ್ದರು. ಆ ವೀಡಿಯೋ ವೈರಲ್ ಆಗಿತ್ತು. ಅದರ ಅಸಲಿ ಕಹಾನಿ ಸಂಪೂರ್ಣವಾಗಿ ಇಲ್ಲಿದೆ ನೋಡಿ…
ನವಲಗುಂದ ಕ್ಷೇತ್ರದ ಜನರ ಸಮಸ್ಯೆ ಹೇಳುವುದಾದರೂ ಯಾರಿಗೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಜನರ ಭಾವನೆಗೆ ಸ್ಪಂದಿಸುವ ಮನೋಭಾವನೆಯನ್ನ ಬೆಳೆಸಿಕೊಳ್ಳುವ ಅವಶ್ಯಕತೆ ಜನಪ್ರತಿನಿಧಿಗಿದೆ, ಅಲ್ವೇ..!?