Posts Slider

Karnataka Voice

Latest Kannada News

ಹಾರೋಬೆಳವಡಿ ಬಳಿ ಮೆಡಿಕಲ್ ಶಾಪ್ ಕಳ್ಳತನ- ಕೊರೋನಾ ಟೈಮಲ್ಲಿ ಕಳ್ಳರು ಮಾಡಿದ್ದೇನು ಗೊತ್ತಾ..

1 min read
Spread the love

ಧಾರವಾಡ: ಕಳ್ಳರು ಕಳ್ಳತನ ಮಾಡಿದ ಮೇಲೂ ತಮ್ಮ ಆರೋಗ್ಯವನ್ನ ಸರಿಯಾಗಿ ನೋಡಿಕೊಳ್ಳಬೇಕೆಂದು ಊಹಿಸಿಕೊಂಡೇ ಮೆಡಿಕಲ್ ಶಾಪ್ ಕಳ್ಳತನ ಮಾಡಿದ್ದು, ಕೊರೋನಾ ಸಮಯದಲ್ಲಿ ಮಾಸ್ಕಗಳನ್ನ ಕದ್ದು ಪರಾರಿಯಾದ ಘಟನೆ ಇನಾಂಹೊಂಗಲದಲ್ಲಿ ನಡೆದಿದೆ.

ಚಂದ್ರು ಹುಚ್ಚಣ್ಣನವರ ಎಂಬುವವರಿಗೆ ಸೇರಿದ ಗುರು ಮೆಡಿಕಲ್ ನಲ್ಲಿ ಕಳ್ಳತನ ನಡೆದಿದ್ದು, ಸಿಮೆಂಟ್ ಸೀಟನ್ನ ಒಡೆದು ಒಳನುಗ್ಗಿದ್ದಾರೆ. ಮಾಸ್ಕ್ ಜೊತೆಗೆ , ಮೂವ್ ಸ್ಪ್ರೇ ಹಾಗೂ 6000 ರೂಪಾಯಿಗಳನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಂಹೊಂಗಲದಲ್ಲಿನ ಪ್ರಕರಣವನ್ನ ಸವದತ್ತಿ ಠಾಣೆಯಲ್ಲಿ ಪೊಲೀಸರು ದಾಖಲಿಸಿಕೊಂಡು ತನಿಖೆಯನ್ನ ಕೈಗೊಂಡಿದ್ದಾರೆ.

ಕೊರೋನಾ ಸಮಯದಲ್ಲಿ ಮೆಡಿಕಲ್ ಶಾಪ್ ನಲ್ಲಿ ನಡೆದ ಮೊದಲ ಪ್ರಕರಣವಾಗಿದ್ದು, ಕಳ್ಳರು ಬೇರೆ ಯಾವುದೇ ಔಷಧವನ್ನಾಗಲಿ, ವಸ್ತುಗಳನ್ನಾಗಲಿ ತೆಗೆದುಕೊಂಡು ಹೋಗದೇ ಮಾಸ್ಕ್ ಮತ್ತು ಸ್ಪ್ರೇಗಳನ್ನ ತೆಗೆದುಕೊಂಡು ಹೋಗಿದ್ದು, ಕಳ್ಳರು ಮೋಡಸ್ ಕಂಡು ಹಿಡಿಯಲು ಪೊಲೀಸರಿಗೆ ಅನುಕೂಲವಾಗಿದ್ದು, ಇಷ್ಟರಲ್ಲೇ ಆರೋಪಿಗಳ ಬಂಧನವಾಗುವ ನಿರೀಕ್ಷೆಯಿದೆ.


Spread the love

Leave a Reply

Your email address will not be published. Required fields are marked *

You may have missed