Karnataka Voice

Latest Kannada News

ಕಸ್ಟಡಿಯಿಂದ ಆರೇ ತಾಸಿನಲ್ಲಿ ಹೊರಗೆ ಬಂದ “ಗರ್ಧಿ ಗಮ್ಮತ್ತಿನ ಮುತ್ತಿನ ಆರೋಪಿ”…

ಧಾರವಾಡ: ತನ್ನದೇ ಮಾಲಿಕತ್ವದ ಸ್ಪಾ ಸೆಂಟರ್ ನಲ್ಲಿನ ಬ್ಯೂಟಿಷಿಯನ್ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಬಂಧಿತನಾಗಿದ್ದ ಕಾಂಗ್ರೆಸ್ ಮುಖಂಡ ಮನೋಜಕುಮಾರ ಕರ್ಜಗಿ ಜಾಮೀನು ಪಡೆದು ಹೊರ ಬಂದಿದ್ದಾರೆ.

ಧಾರವಾಡದ ಗಾಂಧಿನಗರದಲ್ಲಿನ ಲೇ ಮರ್ಜ್ ಯುನಿಸೆಕ್ಸ್ ಸಲೂನ್ ಮತ್ತು ಸ್ಪಾ ದಲ್ಲಿ ಕಾರ್ಯನಿರ್ವಹಿಸುತ್ತಿದ್ದ 19 ವರ್ಷದ ಯುವತಿಯನ್ನ ಗಟ್ಟಿಯಾಗಿ ಹಿಡಿದು ಮುತ್ತು ಕೊಡಲು ಮನೋಜಕುಮಾರ ಕರ್ಜಗಿ ಯತ್ನಿಸಿದರೆಂದು ಯುವತಿ ದೂರು ನೀಡಿದ್ದರು.

ಪ್ರಕರಣ ದಾಖಲು ಮಾಡಿಕೊಂಡಿದ್ದ ವಿದ್ಯಾಗಿರಿ ಠಾಣೆಯ ಪೊಲೀಸರು ಮನೋಜಕುಮಾರ ಕರ್ಜಗಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ತದನಂತರ ಅದೇ ಸಮಯದಲ್ಲಿ ಜಾಮೀನು ಪಡೆದು ಬೆಳಗಿನ ಜಾವ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Leave a Reply

Your email address will not be published. Required fields are marked *