PDO ಲೋಕಾಯುಕ್ತ ಬಲೆಗೆ- 50 ಸಾವಿರ ರೂಪಾಯಿ ಪಡೆಯುವಾಗ ಕೈಗೆ ಕೊಳ…!!!

80 ಸಾವಿರ ರೂಪಾಯಿಗೆ ಬೇಡಿಕೆ
50 ಸಾವಿರಕ್ಕೆ ಒಪ್ಪಿಕೊಂಡಿದ್ದ ಪಿಡಿಓ
ಹೊಟೇಲ್ನಲ್ಲಿ ಲೋಕಾಯುಕ್ತ ದಾಳಿ
ಹಾವೇರಿ: ಗೋದಾಮು ನಿರ್ಮಾಣ ಕಾಮಗಾರಿ ಬಿಲ್ ಪೂರೈಸಿದ್ದಕ್ಕೆ 80 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, 50 ಸಾವಿರ ರೂಪಾಯಿಗಳಿಗೆ ಒಪ್ಪಿಕೊಂಡು ಲಂಚದ ಹಣ ಪಡೆಯುತ್ತಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಜಿಲ್ಲೆಯ ಸವಣೂರು ತಾಲೂಕು ತೆಗ್ಗಿಹಳ್ಳಿ ಗ್ರಾ.ಪಂ. ಪಿಡಿಓ ಅಶೋಕ ದ್ಯಾಮಪ್ಪ ಗೊಂದಿ ಬಂಧಿತ ಆರೋಪಿ, ಫಿರ್ಯಾದುದಾರ ಸವಣೂರು ತಾಲೂಕು ತೆಗ್ಗಿಹಳ್ಳಿಯ ದಾವಲಮಲಿಕ್ ಇಮಾಮಸಾಬ್ ಮುರಡಿ ಎಂಬುವವರು ಗ್ರಾಮದಲ್ಲಿ ಗೋದಾಮು ನಿರ್ಮಾಣ ಕಾಮಗಾರಿಯನ್ನು ಪೂರೈಸಿ ಕಾಮಗಾರಿ ಮೊತ್ತ 1.60
ಲಕ್ಷ ರೂ.ಗಳನ್ನು ಮಂಜೂರು ಮಾಡಿಸಲು ಕೇಳಿದ್ದರು. ಅಶೋಕ ಗೊಂದಿ ಕಾಮಗಾರಿಯ ಒಟ್ಟು ಮೊತ್ತದಲ್ಲಿ ಅರ್ಧ ಅಂದರೆ 80 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ನಂತರ 50 ಸಾವಿರ ರೂ.ಗಳಿಗೆ ಒಪ್ಪಿಕೊಂಡಿದ್ದ. ಹೋಟೆಲ್ನಲ್ಲಿ 50 ಸಾವಿರ ರೂ. ಲಂಚ ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿತ್ತು.