Posts Slider

Karnataka Voice

Latest Kannada News

ಲಾಕ್‌ಡೌನ್ ನಿಯಮ ಉಲ್ಲಂಘನೆ: ಬಿತ್ತು 12ಜನರಿಗೆ ದಂಡ

Spread the love

ರಾಯಚೂರು: ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ರೂಪಿಸಿದ ಲಾಕ್ ಡೌನ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಸಂಬಂಧ ಜಿಲ್ಲೆಯಲ್ಲಿ 12 ಪ್ರಕರಣಗಳು ದಾಖಲಾಗಿವೆ.

ಬಟ್ಟೆ, ಕಿರಾಣಿ ಅಂಗಡಿಗಳ ಮುಂದೆ ಗುಂಪು ಗುಂಪಾಗಿ ಜನರನ್ನು ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ಮೇಲೆ ಮತ್ತೂ ಸಾಮಾಜಿಕ ಅಂತರ ಮಾಸ್ಕ್ ಧರಿಸದೆ, ಸ್ಯಾನಿಟೈಜರ್ ಬಳಸದೆ ಕಾನೂನು ನಿಯಮಗಳ ಉಲ್ಲಂಘನೆ ಮಾಡಿದ್ದವರ ವಿರುದ್ದ ಒಟ್ಟು ಜಿಲ್ಲಾಧ್ಯಂತ 12ಪ್ರಕರಣಗಳು ದಾಖಲಾಗಿವೆ.
ರಾಯಚೂರು-6, ಸಿಂಧನೂರು-4 , ಲಿಂಗಸೂಗೂರು-2 ಪ್ರಕರಣಗಳಾಗಿವೆ. ಅಂಗಡಿ ಮಾಲೀಕರು, ವ್ಯಾಪಾರಸ್ಥರು, ಸಾರ್ವಜನಿಕರು ಕೋವಿಡ್-19 ಸೋಂಕು ನಿಯಂತ್ರಣ ಮಾಡುವ ಕಾನೂನು ಕ್ರಮಗಳನ್ನು ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ ಮುಂದಾಗಿದೆ.
ಕೊರೋನಾ ವೈರಸ್ ದಿನೇ‌ ದಿನೇ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ. ಎಲ್ಲವನ್ನೂ ಅಧಿಕಾರಿಗಳೇ ಮಾಡಲಿ ಎನ್ನುವಂತೆ ಜೀವನ ನಡೆಸುವುದು ಸೂಕ್ತವಲ್ಲ ಎಂಬುದನ್ನ ಪ್ರಜ್ಞಾವಂತರು ಅರಿತುಕೊಳ್ಳಬೇಕಿದೆ


Spread the love

Leave a Reply

Your email address will not be published. Required fields are marked *