Karnataka Voice

Latest Kannada News

“ಬಡವನ ಕೈಗೆ ಅನ್ನದ ಗಂಟು” ನೀಡಿದ ‘ಲೈನ್ಸ್ ಕ್ಲಬ್ ಹುಬ್ಬಳ್ಳಿ ಪರಿವಾರ’

ಹುಬ್ಬಳ್ಳಿ: ಕೊರೋನಾ ಮಹಾಮಾರಿ ಬಡವರ ಬದುಕನ್ನ ನಾಶ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದ್ದವರು ಏನೂ ಮಾಡುತ್ತಿದ್ದಾರೆ ಎಂದು ನೋಡಿದಾಗ, ನಿರ್ಗತಿಕರಲ್ಲಿ ಮಂದಹಾಸ ಮೂಡಿಸುತ್ತಿರುವ ಲೈನ್ಸ್ ಕ್ಲಬ್ ಹುಬ್ಬಳ್ಳಿ ಪರಿವಾರ.

ಹೌದು.. ನಗರದ ವಿವಿಧ ಪ್ರದೇಶಗಳಲ್ಲಿನ ನಿರ್ಗತಿಕರನ್ನ ಗುರುತಿಸಿ ಅವರಿಗೆ ಆಹಾರ ಪದಾರ್ಥಗಳನ್ನ ನೀಡುತ್ತಿದ್ದಾರೆ. ಇಂದು ಕೂಡಾ ಹುಬ್ಬಳ್ಳಿಯ ಸಿದ್ಧೇಶ್ವರ ಕಾಲೋನಿಯಲ್ಲಿ ನೂರಾರೂ ಜನರಿಗೆ ದಿನೋಪಯೋಗಿ ವಸ್ತುಗಳನ್ನ ವಿತರಿಸಿದರು.

ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಮಹೇಂದ್ರ ಸಿಂಘಿ, ಬೀರಬಲ್ ಬಿಸನೋಯ್, ಡಾ.ಸಂಜಯ ಗಣೇಶಕರ, ಗೌತಮ ಗುಲೋಚಾ, ಪಿಂಟು ಸಂಘವಿ, ಮೋಹನ ಸುತ್ತಾರ, ಪ್ರಕಾಶ ಕಾವಡ ಸೇರಿದಂತೆ ಹಲವರು ಭಾಗವಹಿಸಿ, ಬಡವರ ಕೈಗೆ ಅನ್ನದ ಬ್ಯಾಗಿನಿತ್ತರು.

ವಿತರಣೆಯ ಮಾಡುವಾಗಲೂ ಸಾಮಾಜಿಕ ಅಂತರವನ್ನ ಕಾಯ್ದುಕೊಂಡು, ಯಾವುದೇ ತೊಂದರೆಯಿಲ್ಲದ ಹಾಗೇ ಕೋವಿಡ್ ಸಮಯದಲ್ಲಿ ಸಹಾಯ ಮಾಡಿ, ಆದರ್ಶಪ್ರಾಯರಾದರು.

Leave a Reply

Your email address will not be published. Required fields are marked *