ಕಲಘಟಗಿ ಕಾಂಗ್ರೆಸ್ ಗೊಂದಲ-ಕೆಪಿಸಿಸಿ ನಿರ್ಧಾರ ತೆಗೆದುಕೊಳ್ಳಲಿ: ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ
1 min readಹುಬ್ಬಳ್ಳಿ: ಕಲಘಟಗಿ ಕಾಂಗ್ರೆಸ್ ನಲ್ಲಿ ಎದ್ದಿರುವ ಗೊಂದಲದ ಬಗ್ಗೆ ಕೆಪಿಸಿಸಿಯವರೇ ನಿರ್ಧಾರ ತೆಗೆದುಕೊಳ್ಳಲಿ ಎಂದು ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.
ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ವೇಳೆಯಿಂದಲೂ ತಮಗೆ ಅನಾರೋಗ್ಯದ ಕಾರಣ, ಈ ಬಗ್ಗೆ ಯಾರೂ ಏನನ್ನೂ ಕೇಳಿಲ್ಲ. ಆದರೆ, ತಡೆ ಹಿಡಿದಿರುವ ಬಗ್ಗೆ ಹೇಳಿದ್ದರೆಂದು ಅನಿಲಕುಮಾರ ಪಾಟೀಲ ತಿಳಿಸಿದರು.
ಕಲಘಟಗಿ ಕಾಂಗ್ರೆಸ್ ನಲ್ಲಿರುವ ಗೊಂದಲವನ್ನ ಕೆಪಿಸಿಸಿ ಅವರೇ ಸರಿ ಮಾಡಬೇಕೆಂದು ಇದೇ ಸಮಯದಲ್ಲಿ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.
ಮಾಜಿ ಸಚಿವ ಸಂತೋಷ ಲಾಡ, ಕ್ಷೇತ್ರದಲ್ಲಿ ಆಹಾರ ಧಾನ್ಯ ಹಂಚಿಕೆ ಮಾಡಲು ಬಂದ ತಕ್ಷಣವೇ ಹಲವು ಗೊಂದಲಗಳನ್ನ ಸೃಷ್ಟಿ ಮಾಡಲಾಗಿತ್ತು. ಇದೇ ವೇಳೆಯಲ್ಲಿಯೇ ಬ್ಲಾಕ್ ಅಧ್ಯಕ್ಷರನ್ನ ಬದಲಾವಣೆ ಮಾಡುವ ಮೂಲಕ, ತಮ್ಮ ಬಣ ಒಂದು ಕೈ ಮೇಲಿದೆ ಎಂದು ತೋರಿಸಿಕೊಳ್ಳುವ ಪ್ರಯತ್ನಕ್ಕೀಳಿದಿದ್ದ ವಿಧಾನಪರಿಷತ್ ನ ಮಾಜಿ ಸದಸ್ಯ ನಾಗರಾಜ ಛಬ್ಬಿಯವರಿಗೆ, ಆದೇಶವನ್ನ ತಡೆ ಹಿಡಿಸುವ ಮೂಲಕ ಮಾಜಿ ಸಂತೋಷ ಲಾಡ ಅವರು, ತಮ್ಮ ಕೈ ಮೇಲಿದೆ ಎಂದು ತೋರಿಸಿಕೊಟ್ಟಿದ್ದನ್ನ ಇಲ್ಲಿ ಸ್ಮರಿಸಬಹುದು.