Posts Slider

Karnataka Voice

Latest Kannada News

“ಬಾಜಿ ಕಟ್ಟಿ ನೋಡು ಬಾರ್ ಮೀಸೆ ಮಾವಾ”… ಇನ್ಸಪೆಕ್ಟರ್ ಹೊಸಪೇಟೆ ತಂಡದ ಅಸಲಿ ಕಹಾನಿ ಇಲ್ಲಿದೆ ನೋಡಿ…!

Spread the love

ಹುಬ್ಬಳ್ಳಿ: ಇದು ವಾಣಿಜ್ಯನಗರಿಯಲ್ಲಿ ನಡೆಯುತ್ತಿರುವ ಪೊಲೀಸ್ ವ್ಯವಸ್ಥೆ. ಇಲ್ಲಿ ಹಣಕ್ಕಾಗಿ ತಮ್ಮದೇ ಇಲಾಖೆಯ ಮಾನವನ್ನ ಮೂರು ಕಾಸಿಗೆ ನಡು ರಸ್ತೆಯಲ್ಲಿ ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ತಮ್ಮದೇ ಠಾಣೆಯ ಅಧಿಕಾರಿಯ ವಿರುದ್ಧ ಜನರನ್ನ ತಪ್ಪು ದಾರಿಗೆ ಎಳೆದು, ತಾವೂ ಸಾಚಾ ಎಂದು ತೋರಿಸಿಕೊಳ್ಳುವುದಕ್ಕೆ ಮುಂದಾದ ಪ್ರಕರಣದ ಇಂಚಿಂಚೂ ಮಾಹಿತಿ ಕರ್ನಾಟಕವಾಯ್ಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಮಾಹಿತಿಯನ್ನ ನೋಡುವ ಮುನ್ನ ಈ ವೀಡಿಯೋವನ್ನ ಪೂರ್ಣವಾಗಿ ನೋಡಿ…

ಈ ವೀಡಿಯೋದಲ್ಲಿ ಮಾತನಾಡಿದ ಆಟೋ ಚಾಲಕನೋರ್ವ ಮಾಡಿದ ತಪ್ಪಿಗೆ ಪಿಎಸ್ಐ ರವಿ ಎನ್ನೋರು ಹಣವನ್ನ ಪಡೆದು ಸಂಬಂಧಿಸಿದ ರಸೀದಿಯನ್ನೂ ಕೊಟ್ಟಿದ್ದರು. ಇದಾದ ನಂತರ ನಡೆದ ನಾಟಕಕ್ಕೆ ಸೂತ್ರದಾರನಾಗಿದ್ದು ದಕ್ಷಿಣ ಸಂಚಾರಿ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಹೊಸಪೇಟೆ ಅವರ‌ ಖಾಸಾ ಮಾಣಿಕ ಪಟ್ಟೇದ.

ಹೌದು… ಆಟೋದ ದಂಡ ತುಂಬಿದ್ದವನನ್ನ ಹಿಡಿದುಕೊಂಡು ತನ್ನ ಕ್ವಾಟರ್ಸಗೆ ಕರೆದುಕೊಂಡು ಹೋಗಿ, ಆಟೋ ಚಾಲಕ ಮತ್ತೂ ಆತನ ತಾಯಿಯಿಂದ ತನ್ನದೇ ಠಾಣೆಯ ಪಿಎಸ್ಐ ವಿರುದ್ಧ ಹೇಳಿಕೆ ಕೊಡಿಸಿ, ಅದನ್ನ ತನ್ನ ಆಪ್ತರಿಗೆ ನೀಡಿದ್ದ. ಆಗ ಅಸಲಿಯತ್ತು ಹುಡುಕಲು ಬೆನ್ನು ಹತ್ತಿದ್ದು ಕರ್ನಾಟಕವಾಯ್ಸ್.ಕಾಂ.

ಪ್ರಕರಣದ ಕಿಂಗ್ ಪಿನ್ ಪಟ್ಟೇದ ಮಾಡಿಸಿದ ಘನಂಧಾರಿ ಕೆಲಸವನ್ನ ಅದೇ ಆಟೋ ಚಾಲಕ ಮತ್ತೂ ನೊಂದ ಹೆಣ್ಣುಮಗಳು ಹೇಳಿಕೊಂಡರು. ಅದೇಲ್ಲವನ್ನ ಬಹಿರಂಗ ಮಾಡ್ತಿದೆ ಕರ್ನಾಟಕವಾಯ್ಸ್.ಕಾಂ.

ತನ್ನದೇ ಠಾಣೆಯ ಪಿಎಸೈ ಹಣ ಪಡೆಯುತ್ತಿದ್ದಾನೆಂದು ಹೇಳಿಕೆ ಪಡೆದು ಅವರ ವಿರುದ್ಧ ಷಡ್ಯಂತ್ರ ಮಾಡಲು ಹೇಳಿದ್ದು ಯಾರೂ ಎಂಬುದನ್ನ ದಕ್ಷಿಣ ಸಂಚಾರಿ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಹೊಸಪೇಟೆ ಅವರೇ ಹೇಳಬೇಕು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಮತ್ತು ಡಿಸಿಪಿ ಕೆ.ರಾಮರಾಜನ್ ದಕ್ಷ ಅಧಿಕಾರಿಗಳಾಗಿರೋದು ಎಲ್ಲರಿಗೂ ಗೊತ್ತೆಯಿದೆ. ಆದರೆ, ಪಟ್ಟೇದನಂತವರು ತಮ್ಮಾಟ ನಡೆಸಲು ಕೆಲವು ಮೇಲಾಧಿಕಾರಿಗಳ ಮಾತು ಕೇಳಿ ಇಂತಹ ಬ್ರಹ್ನಾಟಕ ಮಾಡ್ತಾಯಿದ್ದಾರೆ. ಇಂತವರ ಅವಶ್ಯಕತೆ ಪೊಲೀಸ್ ಇಲಾಖೆಗೆ ಇದೇಯಾ… ಸಂಬಂಧಿಸಿದ ಅಧಿಕಾರಿಗಳೇ ಉತ್ತರಿಸಬೇಕು…


Spread the love

Leave a Reply

Your email address will not be published. Required fields are marked *