Karnataka Voice

Latest Kannada News

ಅಮವಾಸ್ಯೆಯ ದಿನ ‘161’ ಮಾಡಿ ಆರೋಪಿಗಳ ಕೈ ಬಿಟ್ಟ ಹುಬ್ಬಳ್ಳಿಯ ಪೊಲೀಸರು….!

ಹುಬ್ಬಳ್ಳಿ: ಪ್ರತಿದಿನವೂ ಸಾರ್ವಜನಿಕರ ನೆಮ್ಮದಿಗಾಗಿ ಹಗಲಿರುಳು ಶ್ರಮ ವಹಿಸುತ್ತಿರುವ ನೂರಾರು ಪೊಲೀಸರ ಮಾನವನ್ನ ಹರಾಜು ಮಾಡುವುದನ್ನ ಕೆಲವು ‘161’ ಪೊಲೀಸರು ಬಿಡದೇ ಇರುವುದು ಕಂಡು ಬರುತ್ತಿದೆ.

ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಗಾಂಜಾ ಪ್ರಕರಣವನ್ನ ಮುಚ್ಚಿ ಹಾಕಿದ್ದ ಘಟನೆ ಇನ್ನೂ ಹಸಿರಿರುವಾಗಲೇ, ಹುಬ್ಬಳ್ಳಿಯ ಪೊಲೀಸ್ ಠಾಣೆಯೊಂದರಲ್ಲಿ ಐವರನ್ನ ಹಿಡಿದು, ಇಬ್ಬರಿಂದ ಚೆಂಬು ಮಾಡಿ, ಕೇಸ್ ಮಾಡದೇ ಕಳಿಸಿರುವ ಪ್ರಕರಣವಿದು.

ಕಳೆದ ಫೆಬ್ರುವರಿ ಒಂದರಂದು ಅಮವಾಸ್ಯೆಯ ರಾತ್ರಿಯಂದೇ ನಡೆದಿದ್ದು, ಮುಂಡಗೋಡದ ಮೂಲದ ಆರೋಪಿಯಿಂದ 60 ಸಾವಿರ ರೂಪಾಯಿ ಹಾಗೂ ಹುಬ್ಬಳ್ಳಿಯ ಆರೋಪಿಯಿಂದ 10 ಸಾವಿರ ಹಣವನ್ನ ಪಡೆದಿದ್ದಾರೆಂದು ಗೊತ್ತಾಗಿದೆ.

ಆರೋಪಿಗಳನ್ನ ಹಿಡಿದು ಪ್ರಮುಖ ಮಠವೊಂದರ ಪಕ್ಕದಲ್ಲಿರುವ ಓಪಿಯಲ್ಲಿ ಆರೋಪಿಗಳನ್ನಿಟ್ಟು, 161 ಆದ ನಂತರ ಕಳಿಸಿದ್ದು ಗೊತ್ತಾಗಿದೆ. ಇದಕ್ಕೇಲ್ಲ ಮಾರುತಿಯ ಮಹಿಮೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *